ಗೆಳೆಯರೇ
ಕೆಳಗೆ ಪ್ರಕಟಿಸಿದ ಈ ಲೇಖನ ವಿಜಯ ಕರ್ನಾಟಕದಲ್ಲಿ ಏಪ್ರಿಲ್ ೨೦ ರಂದು ಪ್ರಕಟವಾಗಿದ್ದು ಅದನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.
ಗೆಳೆಯರೇ
ಕೆಳಗೆ ಪ್ರಕಟಿಸಿದ ಈ ಲೇಖನ ವಿಜಯ ಕರ್ನಾಟಕದಲ್ಲಿ ಏಪ್ರಿಲ್ ೨೦ ರಂದು ಪ್ರಕಟವಾಗಿದ್ದು ಅದನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.
'ತಾನೊಂದು ಬಗೆದರೆ ದೈವವೊಂದು ಬಗೆದಂತೆ' ಇದು ನಮ್ಮ ಇಸ್ರೋದ ಇವತ್ತಿನ ಗತಿ. 1992 ರಲ್ಲಿ ರಷ್ಯ ದೇಶದಿಂದ ಭಾರತಕ್ಕೆ ಬರಬೇಕಿದ್ದ cryogenic ಟೆಕ್ನಾಲಜಿಯನ್ನು ವಿಶ್ವದ ದೊಡ್ಡಣ್ಣ ಅಮೆರಿಕದ ಸಣ್ಣ ಬುದ್ದಿ, ಕ್ಷಮಿಸಿ ಚಿಲ್ಲರೆ ಬುದ್ಧಿಯಿಂದಾಗಿ ತಪ್ಪಿ ಹೋಗಿತ್ತು. ಆದರೆ ಭಾರತದ ವಿಜ್ಞಾನಿಗಳೇನು ಸಮಾನ್ನೆರೆ? ಅದನ್ನೇ ಒಂದು ಸವಲನ್ನಾಗಿ ಸ್ವೀಕರಿಸಿ ಅವತ್ತು ರಷ್ಯದಿಂದ ಬರಬೇಕಿದ್ದ ಅದೇ ತಂತ್ರಜ್ಞಾನವನ್ನ 15 ವರ್ಷಗಳ ಪರಿಶ್ರಮ, ಬೆವನಿರಿಂದ ನಮ್ಮ ನೆಲದಲ್ಲೇ ತಮ್ಮ ಬುದ್ದಿವಂತಿಕೆಯಿಂದ ತಯಾರಿಸಿ ನಮ್ಮ ಬಗ್ಗೆ ಹಗುರವಾಗಿ ಮಾತಾಡುವವರಿಗೆ ಸರಿಯಾದ ಪಾಠ ಕಲಿಸಿ ನಮ್ಮ ಶಕ್ತಿ ಏನು ಅನ್ನೋದನ್ನ ಜಗತ್ತಿಗೆ ತೋರಿಸಿದ್ದಾರೆ ನಮ್ಮ ಇಸ್ರೋ ವಿಜ್ಞಾನಿಗಳು. ಆದರೆ ಇಷ್ಟೆಲ್ಲಾ ಕಸರಿತ್ತಿನ ಮದ್ದೆ ಮೊನ್ನೆ ನಡೆದ GSLV -D3 ರಾಕೆಟ್ ಉಡಾವಣೆ ವಿಫಲವಾಗಿದ್ದು ಸ್ವಲ್ಪ ಕೆದಕರವೆನಿಸುತ್ತಿದೆ. ಆದರೋ ಇಸ್ರೋದ ಸಾಧನೆ, ಸಾಮರ್ಥದ ಬಗ್ಗೆ ಎರಡು ಮಾತಿಲ್ಲ. ದೇಶದ ಅರ್ಥ ವ್ಯವಸ್ತೆ, ಆರೋಗ್ಯ ವ್ಯವಸ್ತೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ ಕಾಣಲು ಕಾರಣಿಕರ್ತ ಈ ಇಸ್ರೋ, ಈ mission ಸಫಲವಾಗಿದ್ದರೆ cryogenic ಟೆಕ್ನಾಲಜಿಯನ್ನು ಹೊಂದಿದ ಪ್ರಪಂಚದ ಐದು ರಾಷ್ಟ್ರಗಳಾದ ಅಮೇರಿಕ, ರಷ್ಯ, ಜಪಾನ್, ಫ್ರೆಂಚ್ ಮತ್ತು ಚೀನಾದಂತ ದೇಶಗಳ ಸಾಲಿಗೆ ನಮ್ಮ ದೇವಶವೂ ಸೇರುತ್ತಿತು ಅಷ್ಟೇ ಅಲ್ಲ ಇವತ್ತಿನ TV, ಮೊಬೈಲ್ ಇಂಟರ್ನೆಟ್ ಬಳಕೆಯ ದಿಕ್ಕೇ ಬದಲಾಗುತ್ತಿತು. ISRO ಹೇಳಿಕೊಂಡಂತೆ GSLV -D3 ಉದ್ದೇಶ ಅಧುನಿಕ ತಂತ್ರಜ್ಞಾನವನ್ನ್ನು ಭಾರತದ ಪ್ರತಿ ಹಳ್ಳಿಯ ಪ್ರತಿ ಮನೆಗೆ ಒಯ್ಯಿಯೋದೆ ಆಗಿತ್ತು. GSLV -D3 ಯಿಂದಾಗಿ ದೇಶದ ಯಾವುದೇ ಮೂಲೆಯಿಂದ ಇಂಟರ್ನೆಟ್ ಬಳಕೆ ಮಾಡಬಹುದಿತ್ತು, ಜನರ ಜೀವನ ಹಾಸು ಹೊಕ್ಕಾಗಿರುವ ಮೊಬೈಲ್ ಮೂಲಕ ಎಲ್ಲೋ ನಡೆದ ಕ್ರಿಕೆಟನ್ನು ಲೈವ್ ಆಗಿ ಹಾಗು ಸ್ಪಷ್ಟ ಚಿತ್ರ ಮತ್ತು ದ್ವನಿಯಲ್ಲಿ ನೋಡಬಹುದಿತ್ತು. ಇಂತ ಮಹಾ ಯೋಜನೆಯ ಕನಸು ಇಸ್ರೋಗೆ ಕನಸು ನನಸಾಗದೆ ಇರೋದಕ್ಕೆ ತುಂಬಾ ನಿರಾಸೆಯಾಗಿದೆ.
ಆದರೆ ಇದಕ್ಕಿಂತ ಭ್ರಮ ನಿರಶನ ಆಗೋದು ನಮ್ಮ ಜನರ, ರಾಜಕಾರಣಿಗಳ, ಮಾದ್ಯಮದ ವರ್ತನೆ ಮತ್ತು ತಿಳುವಳಿಕೆಯನ್ನು ನೋಡಿದಾಗ. ಎಷ್ಟು ಜನಕ್ಕೆ ಏಪ್ರಿಲ್ 15 ರ ಸಾಯಂಕಾಲ GSLV -D3 ರಾಕೆಟ್ ಉಡಾವಣೆ ಇದೆ ಅನ್ನೋದು ಗೊತ್ತಿತ್ತು? ಉಡಾವಣೆ ವಿಫಲ ಅದ ನಂತರ ನನ್ನ ಮಿತ್ರರಿಗೆ ಅದರ ಬಗ್ಗೆ ಹೇಳಿದೆ. ಅವರ ಪ್ರತಿಕ್ರಿಯೆ ಕೇಳಿ ರೋಶಿ ಹೋದೆ. ಒಬ್ಬ ಹೇಳಿದ 'ಭಾರತದ ವಿಜ್ಞಾನಿಗಳ ಹಣೆ ಬರಹನೆ ಇಷ್ಟು, ಏನು ಸಾದಿಸೊಲ್ಲ, ನಮ್ಮವರು ತಯಾರು ಮಾಡಿದ್ದಕ್ಕೆ ರಾಕೆಟ್ ವಿಫಲ ಆಯಿತು, ಅದೇ ಅಮೇರಿಕ ಇಲ್ಲ ಜಪಾನ್ ನವರು ತಯಾರಿಸಿದ್ದರೆ ಕಂಡಿತ success ಅಗ್ತಾ ಇತ್ತು' . ಇದು ಬರೀ ನನ್ನ ಮಿತ್ರನ ಮಾತಲ್ಲ ಬಹುತೇಕರು ಇದೆ ರೀತಿ ಮಾತಾಡ್ತಾ ಇದ್ದಾರೆ. ಒಂದು ಕ್ಷಣ ನಮ್ಮ ಬಗ್ಗೆ ನಮಗೆ ಗೌರವ ಇಲ್ಲದೆ ನಾಯಿಗಿಂತ ಕೀಳಾಗಿ ಜೀವನ ಮಾಡುತ್ತಿರು ಮನುಷ್ಯರು ನಾವು ಅನ್ನಿಸಿತು. ಒಂದು ಅರ್ಥ ಮಾಡಿಕೊಳ್ಳಬೇಕು ಇವತ್ತು ನಾವು ಮಾಹಿತಿ ತಂತ್ರಜ್ಞಾದಲ್ಲಿ ಮುಂದುವರೆದು ಸಾವಿರಾರು ಕಂಪನಿಗಳು ಹುಟ್ಟಿ. ನನ್ನಂತ ಲಕ್ಷಾಂತರ ಮದ್ಯಮ ವರ್ಗದ ಹುಡುಗರು ಸಾಫ್ಟ್ವೇರ್ ಇಂಜಿನಿಯರ್ ಆಗಿ ತಮ್ಮ ತಮ್ಮ ಅಪ್ಪ ಅಮ್ಮನ್ನ ನೆಮ್ಮದಿಯಿಂದ ನೋಡಿಕೊಳ್ತಾ ಇದ್ದೇವೆ ಅಷ್ಟೇ ಅಲ್ಲ ಹೊರ ದೇಶಕ್ಕೆ ಹೋಗಿ ಬರಬೇಕು ಅಂತ ಕನಸು ಕಾಣತಿದ್ದೇವೆ ಅಂದರೆ ಅದಕ್ಕೆಲ್ಲ ಮುಖ್ಯ ಕಾರಣ ಅಮೆರಿಕದಿಂದ ಇಲ್ಲವೇ ಇಂಗ್ಲೆಂಡಿನಿಂದ ಬರುವ ಡಾಲರ್ ದುಡ್ಡಲ್ಲ, ನಮ್ಮ ಇಸ್ರೋದ ಶ್ರಮ.
ಇನ್ನು ಮಾದ್ಯಮದ ಬಗ್ಗೆ ಹೇಳಬೇಕೆಂದರೆ ಹೇಳಲು ಮಾತೆ ಬರೋಲ್ಲ. ರಸಿಕ ನಿತ್ಯಾನಂದ ಸ್ವಾಮಿಯ ರಾಸಲೀಲೆಯನ್ನು ಮತ್ತೆ ಮತ್ತೆ ಗಂಟೆ ಗಟ್ಟಲೆ ಪ್ರಸಾರ ಮಾಡುತ್ತವೆ, ನಾಲ್ಕು ಐದು ಮಂದಿಯನ್ನು ಕೂಡಿಸಿಕೊಂಡು ದಿನಗಟ್ಲೆ ಚರ್ಚೆ ನಡೆಸುತ್ತವೆ, IPL ಮ್ಯಾಚ್ ಗಳ ನೇರ ಪ್ರಸಾರ ಮಾಡುತ್ತವೆ, ಹುಡುಗಾಟ ಹಾಡುವ ಲಲಿತ್ ಮೋದಿಯ ಮತ್ತು 50 ವಸಂತಗಳನ್ನ ಕಳೆದರೂ maturity ಇಲ್ಲದಂತೆ ಮಾತಾಡೋ ಶಶಿ ತರೂರ್ ಮೋಜಿನ ಆಟಕ್ಕೆ ಬಣ್ಣ ಬಳಿದು ರಂಗು ರಂಗಾಗಿ Telecast ಮಾಡುತ್ತವೆ. ರಾಕಿ ಸಾವಂತ, ರಾಹುಲ್ ಮಹಾಜನ್, ಪಕಾ ಪಕಾ ಅಂತ ನಗುವ ನವಜೋತ್ ಸಿಂಗ್ ಸಿದ್ಧುವಿನ ಕಾರ್ಯಕ್ರಮಕ್ಕೆ ಅದ್ದೂರಿ ಸೆಟ್ ಹಾಕಿ ಬೇರೆ ಬೇರೆ ಆಯಾಮಗಳಲ್ಲಿ ಶೂಟ್ ಮಾಡಿ ತೋರಿಸುತ್ತಾರೆ ಆದರೆ ರಾಕೆಟ್ ಉಡಾವಣೆ ಬಗ್ಗೆ ಐದು ನಿಮಿಷಕ್ಕಿಂತ ಹೆಚ್ಚಿನ ಸುದ್ಧಿ ಬಿತ್ತರ ಮಾಡೋದಿಲ್ಲ. ಬೆರಳೆಣಿಕೆಯ ಪತ್ರಿಕೆಗಳನ್ನ ಬಿಟ್ಟರೆ ಯಾವೊಂದು ಪತ್ರಿಕೆ ಒಂದು ಪುಟ ಬಿಡಿ ಅರ್ಧ ಪುಟದಷ್ಟು GSLV -D3 ರಾಕೆಟ್ ಉಡಾವಣೆಯ ಮಾಹಿತಿಯನ್ನು ಪ್ರಕಟಿಸಿವೆ ಹೇಳಿ?
ನಮ್ಮ ರಾಜಕಾರಣಿಗಳೋ, ಅವರಿಗೆ ತಮ್ಮ ಕುರ್ಚಿಯನ್ನು ಹೇಗೆ ಉಳಿಸಿಕೊಳ್ಳಬೇಕು, ಎಲ್ಲೆಲ್ಲಿ ಹೇಗೆ ಎಲೆಕ್ಷನ್ ಮಾಡಬೇಕು, ಯಾವ ಕಳ್ಳನಿಗೆ ಸುಳ್ಳನಿಗೆ ಟಿಕೆಟ್ ಕೊಡಬೇಕು, ಎಷ್ಟು ಹಣವನ್ನು ಸುರೀಬೇಕು ಹೇಗೆ ಅದಕ್ಕಿಂತ ಎರಡರಷ್ಟು ದುಡ್ಡು ಹೇಗೆ ಮಾಡಬೇಕು, ಎದುರಿಗಿನ ಪಕ್ಷದ ಮೇಲೆ ಹೇಗೆ ಕೆಸರು ಎರಚಬೇಕು ಅಂತ ಯೋಚನೆ ಮಾಡೋದಕ್ಕೆ ಟೈಮ್ ಇಲ್ಲ ಇನ್ನು ದೇಶದ, ಇಸ್ರೋದ ಬಗ್ಗೆ ಆಲೋಚನೆ ಮಾಡಲು ಅಗುತ್ತಾ? ಇವತ್ತು ಎಷ್ಟೋ ನಮ್ಮ ರಾಜಕಾರಣಿಗಳಿಗೆ ಇಸ್ರೋದ long form ಬಿಡಿ ಅದು ನಮ್ಮ ದೇಶದಲ್ಲಿ ಇದೆಯಾ, ಅದು ಏನು ಮಾಡ್ತಾ ಇದೆ ಅನ್ನೋದೇ ಗೊತ್ತಿಲ್ಲ.
ಇನ್ನು ನಮ್ಮ ಯುವಕರು, ವಿದ್ಯಾವಂತ ಯುವಕರು ಕೆಲಸ, ಪ್ರೀತಿ, ಪ್ರೇಮ, ಪುಬ್, ಮ್ಯಾಚ್ ಅಂತ ಅದರಲ್ಲೇ ಬ್ಯುಸಿ, ಹಳ್ಳಿಯ ಜನ ಚೈನಾದ ಮೊಬೈಲ್ನಲ್ಲಿ ಜನಪದ ಗೀತೇನೋ, ಬಜನೇ ಪದನೋ ಹಾಕಿಕೊಂಡು ಕೇಳೋದರಲ್ಲಿ ಬ್ಯುಸಿ, ನಮ್ಮ ಯುತಿಯರು ಗೊಳೋ ಅಂತ ಕಣ್ಣೀರು ಹಾಕುವ ವರ್ಷಾನು ವರ್ಷ ಬರುವ ಕಿರಿ ಕಿರಿ ಮೇಗ ಧಾರಾವಾಹಿನ ಕಷ್ಟ ಆದರೂ ಇಷ್ಟ ಪಟ್ಟು ನೋಡ್ತಾರೆ ಹೊರತು ಇಸ್ರೋದ ರಾಕೆಟ್ launch ನೋಡಿ ಟೈಮ್ ವೇಸ್ಟ್ ಮಾಡೋಲ್ಲ.
ಯಾರು ತಮ್ಮತ್ತ ಗಮನ ಹರಿಸಿದರು ಬಿಟ್ಟರೂ, ಅವರ ಬಗ್ಗೆ ಜನ ತಿಳಿದುಕೊಂಡು ವಿಜ್ಞಾನಿಗಳನ್ನು ನಿಜ ಜೀವನದ ಹೀರೋಗಳು ಅಂತ ಅಂದುಕೊಂಡರೂ ಬಿಟ್ಟರೂ ತಮ್ಮ ಕೆಲಸನ ತಾವು ಮಾಡೇ ಮಾಡ್ತಾರೆ, ದೇಶದ ಭವಿಷ್ಯವನ್ನು ಉತ್ತಮ ರೀತಿಯಲ್ಲೇ ರೂಪಿಸುತ್ತಾರೆ. ಆದರೆ ಒಂದು ವಿಷಯ ಅಂದ್ರೆ ಜನಗಗಳಲ್ಲಿ ಇಸ್ರೋ ಮತ್ತು ಅದರ ಬಗ್ಗೆ ತಿಳುವಳಿಕೆ ಬಂದು, ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಾಮುಕ್ಯತೆ ಪಡೆದರೆ ಅದು ನಮ್ಮ ಎಮ್ಮೆ ತೊಗಲಿನ ರಾಜಕಾರಿಣಿಗಳಿಗೆ ತಟ್ಟಿ ಇಸ್ರೋಗೆ ಹೆಚ್ಚು ಹೆಚ್ಚು ಪ್ರಯೋಗ ಮಾಡಲು ಅವಕಾಶ ಕೊಡ್ತಾರೆ, ಆ ಮೂಲಕ ವಿಫಲ ಆದರೂ ಸಫಲ ಆದರೂ ನಮ್ಮ ಇಡೀ ದೇಶದ ಜನ ನಮ್ಮ ಜೊತೆ ಇದ್ದಾರೆ ಏನೂ ಆತ್ಮ ಶ್ತೈರ್ಯ ಇಸ್ರೋಗೆ ಇರುತ್ತೆ, ಮತ್ತೆ ಮುನ್ನುಗ್ಗುತ್ತೆ.
ಫೈನಲ್ ಮ್ಯಾಚ್ ನಲ್ಲಿ ಭಾರತ ಗೆದ್ದು ಬರಿಲಿ ಅಂತ ಪೂಜೆ ಹೋಮಗಳನ್ನು ಮಾಡೋ ರೀತಿ ನಮ್ಮ ಜನ ರಾಕೆಟ್ ಉಡಾವಣೆ ಸಮಯದಲ್ಲಿ ಪೂಜೆ ಹೋಮಗಳನ್ನ ಮಾಡಬೇಕು, ಉಡಾವಣೆ ಯಸಸ್ವಿ ಆದರೆ ತಮ್ಮ ಮನೆಯ ಹಬ್ಬದಂತೆ ಹೋಳಿಗೆ ಮಾಡಿಕೊಂಡು ಹುಂಡು ಸಂಬ್ರಮಿಸಬೇಕು, ವಿಫಲ ಆದ್ರೆ ದೂರದ ಯಾವುದೋ ಸಂಬಂದಿ ತೀರಿ ಹೋದ ದುಖ: ಮನಸಲ್ಲಿ ಮನೆಯಲ್ಲಿ ಮಡುಗಟ್ಟಬೇಕು, ಹಾಗೆ ಎಷ್ಟೇ ವಿಫಲವಾದ್ರೂ ಇಸ್ರೋನಲ್ಲಿ ನಂಬಿಕೆ ಇಟ್ಟು ಸಕ್ಸಸ್ ಗಾಗಿ ಹರಿಸಬೇಕು, ಹರಿಸಬೇಕು ಆಗ ನಮ್ಮ ಭಾರತ ದೇಶದಲ್ಲಿ ಇಸ್ರೋದಂತ ನೂರಾರು ಸಂಸ್ತೆಗಳು ಹುಟ್ಟುತ್ತವೆ, ದೇಶದ ಉದ್ಧಾರಕ್ಕಾಗಿ ದುಡಿಯುತ್ತವೆ. ಅಂತ ಕಾಲ ಯಾವತ್ತು ಬರುತ್ತೋ ಕಾದು ನೋಡಬೇಕು.
-ರಾಜಶೇಕರಗೌಡ ಹೋತುರ್, ಬಾಗಲವಾಡ
ರಾಯಚೂರು
rjgouda@gmail.com
9900216597