Saturday, November 13, 2010

ನೀನೊಂದು ಯಕ್ಷ ಪ್ರಶ್ನೆ ಗೆಳತಿ ನನಗೆ




ಬದುಕು ಬೇಡವೆಂದು ಬಲಗಾಲಿನಿಂದ ಒದ್ದಾಗ
ಬಿದ್ದು ಒದ್ದಾಡುತಿದ್ದ ನನ್ನ ಮುದ್ದು ಮಾಡಿ ಎಬ್ಬಿಸಿದವಳು ನೀನು
ಎದ್ದವನು ಗೆದ್ದು ಮೆರೆವ ಹೊತ್ತಿಗೆ ಸದ್ದೇ ಮಾಡದೆ ಸರಿದು ಹೋದೆ ಎಲ್ಲಿಗೆ?

ಸವಿಗನಸು ಕಾಣುವ ಕಣ್ಣಿಗೆ ಕಾರಿದ ಪುಡಿ ಎರಚಿ
ಮಕಾಡೆ ಮಲಗಿಸಿತ್ತು ಈ ಸಾವಿಲ್ಲದ ಸಮಯ
ಸಮಯಕ್ಕೆ ಸಡ್ಡು ಹೊಡೆದು ದಿಕ್ಸೂಚಿಯಾದವಳು ದಿಗಂತವನ್ನೇಕೆ ದಾಟಿ ಹೋದೆ?

ಕುಣಿವ ಕಾಂಚಾಣ ಕೈಯಲ್ಲಿದ್ದಾಗ ಮನೆ ತುಂಬಾ ಬಂದುಗಳು
ಕಾಂಚಾಣ ಕೈ ಕೊಟ್ಟು, ಬಂದು ಬಳಗವೆಲ್ಲ ಬಾಯಿ ತೆರೆದು ಹುಗಿತಿರುವಾಗ
ನನ್ನಲ್ಲಿ ಹುದುಗಿದ್ದ ಶಕ್ತಿಯೆಲ್ಲ ಒಗ್ಗೂಡಿ ಹೋರಾಟದ ಕಿಚ್ಚು ಹಚ್ಹ್ಚಿದವಳು ಹೊರಟೆ ಎಲ್ಲಿಗೆ?

ಜಗತ್ತು ಜಾಲಿ ಕಲ್ಲಿನಿಂದ ಹುಚ್ಚನೆಂದು ಹೊಡಿಯುತ್ತಿರುವಾಗ
ನೀರು ನೆರಳಿಲ್ಲದೆ ನರಳಿ ನರಳಿ ಸಾಯುವಾಗ
ಪ್ರೀತಿಯ ಗುಟುಕು ಕೊಟ್ಟು ಜೀವಕೆ ಜೀವ ಕೊಟ್ಟವಳು ಜೀವನದಲ್ಲಿ ಜೋತೆಯಾಗಲಿಲ್ಲ ಯಾಕೆ?
ರಾಜಶೇಕರಗೌಡ ಹೊತುರ್
Mobile: 7760961477

Sunday, October 10, 2010

ಕಳೆದು ಹೋದವಳ ಕಾಡಿಸುವ ಪ್ರೀತಿ


ಕಳೆದು ಹೋದವಳ ಕಾಡಿಸುವ ಪ್ರೀತಿ

ಆತನೋ ಕನಸುಗಳ ಬೆನ್ನೆರುವ ಹುಂಬ, ನನಸುಗಳ ಮೇಲೆ ಸವಾರಿ ಮಾಡುವ ಕದಂಬ, ಹೆಸರು ದತ್ತು. ಆಕೆಯೋ ಮಾತಿನ ಮಳ್ಳಿ, ನೋಟದಲ್ಲೇ ಹೃದಯ ಕದಿಯೋ ಕಳ್ಳಿ, ಜೀವಂತ ಶಿಲಾ ಬಾಲಿಕೆಗೆ ಇನ್ನೊಂದು ಹೆಸರೇ ಗೌರಿ.

ಅವಲ್ಲೆವೂ ಅವರ ಜೀವನ ಅತ್ಯಮೂಲ್ಯ ಸಂತಸದ ಕ್ಷಣಗಳು, ಅದರಲ್ಲಿ ಏನೋ ಒಂದು ತಾರಾ ಸುಖ ಕಂಡಿದ್ದವು ಆ ಎರಡು ಪ್ರೀತಿಯ ಹೃದಯಗಳು. ಮುಂಗಾರಿನ ತುಂತುರು ಹನಿ ಸುಟ್ಟು ಕರಲಾಗಿದ್ದ ಮಣ್ಣಿಗೆ ಜೀವ ನೀಡಿ ಮುಗ್ಗು ವಾಸನೆ ತರುವ ಇಳಿ ಸಂಜೆ ಸಮಯ. ತಲೆ ಹೋಗೋ ಕೆಲಸ ಇದ್ದರೂ ಎಲ್ಲಿತ್ತೋ ಅಲ್ಲಿಗೆ ಬಿಟ್ಟು ಚಿರತೆಯಂತೆ ಓಡಿ ಬರುತ್ತಿದ್ದ ಅವನು, rank ಹೇಗೆ ಬರೋದು ಅಂತ ಹೇಳಿಕೊಡೋ ಕ್ಲಾಸ್ ನಡಿತಿದ್ದರೂ ಅದನ್ನೇ ತಪ್ಪಿಸಿ ಜಿಂಕೆಯಂತೆ ಎಗರಿ ಎಗರಿ ಬರುತ್ತಿದ್ದ ಅವಳು. ಅವರಿಬ್ಬರ ಸಂಗಮವನ್ನೇ ಕಾಯುತಿದ್ದ ಜಿನಿ ಜಿನಿ ಹನಿಯಿಂದ ಸುರುವಾಗಿ ದೋ ಎಂದು ಸುರಿವುಯ ಆ ಮಳೆ. ಅವನ ಬಾಹುವನ್ನು ಗೌರಿ ತನ್ನೆದೆಗೆ ಗಟ್ಟಿಯಾಗಿ ತಬ್ಬಿಕೊಂಡು ಮಳೆಯನಿಯಲ್ಲಿ ನೆನೆಯುತ್ತ ಹೆಜ್ಜೆಯ ಜೊತೆ ಹೆಜ್ಜೆ ಹಾಕ್ತ ಇದ್ರೆ ಇಡೀ ರಸ್ತೆಯ ಜನ ಅವರನ್ನು ಇವರೇನು ಹುಚ್ಚರೋ ಎಂದು ಒಂದು ಕ್ಷಣ ಬೆಕ್ಕಸ ಬೆರಗಾಗಿ ನೋಡ್ತಾ ಇರ್ತಿದ್ದರು. ಹಾಲು ಕೆನೆಯಷ್ಟು ಮೃದುವಾದ ಅವಳ ಹಣೆಯಿಂದ ಜಾರಿ ಸಂಪಿಗೆಯ ಆ ಮೂಗನ್ನು ಬಳಸಿ, ಬಿಲ್ಲಿನಾಕಾರದ ಕೆಂಪು ತುಟಿಗಳಿಗೆ ಮುತ್ತಿಟ್ಟು ಉಬ್ಬಿದ ಗಲ್ಲದಿಂದ ಬಿಳುತಿದ್ದ ಪ್ರತಿ ಹನಿಯನ್ನು ಬೊಗಸೆಯಲ್ಲಿಡಿದು ಅಮ್ರುಥದಂತೆ ಕುಡಿತಾ ಇದ್ದ ದತ್ತು. ಚಂದ್ರಪ್ಪನ ಇಸ್ ಕ್ರೀಮ್ ಅಂಗಡಿಯಲ್ಲಿ ಕೋನ್ ಇಸ್ ತಗೊಂಡು ಮೆಚ್ಚಿನ ಗಾಂದಿ ಗಾರ್ಡನ್ ನ ಮೂಲೆಯ ಆಲದ ಮರದ ಕೆಳಗೆ ತೊಯ್ದ ಕಲ್ಲು ಬೆಂಚಿನ ಮೇಲೆ ಕುಲಿತುಕೊಳ್ಳುತ್ತಿದ್ದಳು ಅವಳು, ಅವಳ ಮಡಿಲಲ್ಲಿ ಮಗುವಂತೆ ಮಲಗಿ ಒಮ್ಮೆ ಎಲೆಯಿಂದ ಬೀಳುತಿದ್ದ ಹನಿಗೆ ಇನ್ನೊಮ್ಮೆ ಅವಳ ಕೋನ್ ಐಸ್ ಕ್ರೀಮ್ ಗೆ ಬಾಯಿವೊಡ್ದುತಿದ್ದ ಅವನು. ಅವಳೆಷ್ಟೇ ಸಿಮಿಡಿಗೊಂಡು ಸಿಟ್ತಾಗ್ತಾ ಇದ್ದರೂ ಅವಳ ಐಸ್ ಕಿತ್ತಿಕೊಂಡು ತಿನ್ನ್ನೋದರಲ್ಲಿ ಇರೋ ಮಜಾ ಮತ್ತೆಲ್ಲಿ ಕಾಣಲು ಸದ್ಯವೇ ಇರಲ್ಲಿಲ್ಲ ಅವನಿಗೆ. ಮಳೆ ನಿಂತು ಬೀಸುತಿದ್ದ ತಣ್ಣನೆಯ ಗಾಳಿಗೆ ಸಣ್ಣಗೆ ಚಳಿಯಾಗಿ ಅವಳನ್ನೊಮ್ಮೆ ಗಟ್ಟಿಯಾಗಿ ತಬ್ಬ್ಬಿಕೊಂಡು ಮಲಗಿದರೆ ಸಮಯ ಹೋಗಿ ರಾತ್ರಿಯಗೊದೆ ಗೊತ್ತಾಗ್ತಾ ಇರಲಿಲ್ಲ. ಒಂಬತ್ತು ಗಂಟೆಯಲ್ಲಿ ನಿಶಾಚರಿಗಳಂತೆ ಸಿಕ್ಕ ಸಿಕ್ಕ ಓಣಿ ರಸ್ತೆಗಳಲ್ಲಿ ಸುತ್ತಿ, ಸಾಕಾಗಿ ಕೊನೆಗೆ ಅವಳನ್ನು ಅವಳ ಮನೆಗೆ ಮುಟ್ಟಿಸಿ ಇನ್ನೇನು ತನ್ನ ದಾರಿ ಹಿಡಿಯಬೇಕು ಅನೋಷ್ಟರಲ್ಲಿ ಗೌರಿ ತನ್ನ ನಾಲಿಗೆಯ ಚೂಪನ್ನು ಮುಂದೆ ಮಾಡಿ ಮೂಗು ಮುರಿದು ಅಣಕಿಸಿ ಟಾಟಾ ಹೇಳಿ ಮನೆಯೊಳಕ್ಕೆ ಓಡಿದಾಗ ಅವನ ಎದೆಗೆ ಒಮ್ಮೆ ಆಕೆಯ ತುಟಿಗಳಿಂದ ಮುತ್ತಿಕ್ಕಿದಂತ ಜುಮ್ಮೆನ್ನುವ ಅನುಭವ ಹೇಗೆ ಮರಿಯೋಕೆ ಸಾದ್ಯ.
ಬೆಳಿಗ್ಗೆ ಗೋಡೆಯ ಮೇಲಿನ ಗಡಿಯಾರ ಆರು ಮುಟ್ಟೋದಕ್ಕೂ ಮೊದಲೇ ಅವಳ ಕಾಲ್ ಅವನ ಮೊಬೈಲ್ಗೆ. ಅರೆ ತೆರೆದ ನಿದ್ದೆಗಣ್ಣಲ್ಲೇ ಸೆಲ್ ಎತ್ತಿ ಕಿವಿಗಿಟ್ಟುಕೊಂಡರೆ ಕೆಲಿಸುತಿದ್ದುದು ಅವಳ ಮಧುರ ಕಂಠ ಅಲ್ಲ ಬರೀ ಸೀನುಗಳ ಮೇಲೆ ಸೀನು. ಶೀತ ಆಗಿ ಅವಳ ಮೂಗು ಕಟ್ಟಿ, ಪ್ರತಿ ಬಾರಿ ಮೂಗೆರಿಸುತಾ ಗುಡ್ ಮಾರ್ನಿಂಗ್ ಹೇಳ್ತಾ ಇದ್ದರೆ ದತ್ತುಗೆ ಒಳಗೊಳಗೇ ನಗು ಬರ್ತಾ ಇತ್ತು.
ದೇವರು ಎಷ್ಟು ಒಳ್ಳೆಯವೊನೋ ಅಷ್ಟೇ ಕ್ರೂರಿಯೂ ಹೌದು. ಅವನಿಗೆ ಒಂದು ಭಯ, ಎಲ್ಲರೂ ಸುಖವಾಗಿದ್ದರೆ ತನ್ನನ್ನೆಲ್ಲಿ ಮರೆತು ಬಿಡ್ತಾರೋ ಅನ್ನೋ ಸಂಕಟ,ಅದಕ್ಕೆ ಯಾರನ್ನು ಸಂತೋಷವಾಗಿ ಜೀವಿಸಲು ಬಿಡೋದೇ ಇಲ್ಲ. ಅದೊಂದು ಮಟ ಮಟ ಮಧ್ಯಾನ್ಹ ಕಾಲೇಜ್ ಮುಗಿಸಿ ತನ್ನ ಮುದ್ದಾದ ಪೆಪ್ಟಿ ಬೈಕಲ್ಲಿ ಗಾಳಿಯಲ್ಲಿ ತೇಲುತ್ತ ಹೋಗುತಿದ್ದಳು ಗೌರಿ.ಬಿಳಿಯ ಚೋದಿದಾರದಲ್ಲಿ ಮುತ್ತಿನಂತೆ ಕಂಗೊಳಿಸುತಿದ್ದ ಸುಂದರಿ, ಕುತ್ತಿಗೆಗೆ ಸುತ್ತಿದ್ದ ತುಪ್ಪಟ ಹಾಗೆ ಹರಡ್ತಾ ಇತ್ತು. ವಿಧಿ ಲಿಕಿತ ಯಾರು ತಾನೆ ಬಲ್ಲರು. ಹಿಂದಿನಿಂದ ಬಂದ ಟ್ರುಕ್ ನ ಕೊಂಡಿಗೆ ದುಪ್ಪಟ್ಟ ಸಿಕ್ಕಿ ಎಳೆದೆ ಬಿಡ್ತು. ಏನಾಗುತಿದೆ ಅನ್ನೋಷ್ಟರಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದು ರಕ್ತದ ಮಡುವಿನಲ್ಲಿ ಹೆಣವಾಗಿ. ಕನಸಲ್ಲೂ ಎಣಿಸಿರಲಿಲ್ಲ ಅವನು, ಆ ಸೀನು, ಅಣುಕು, ಆ ಐಸ್ ಕ್ರೀಮ್ ಕೊನೆಗೆ ಅವಳೇ ದೂರ ಬಹು ದೂರ ಹೋಗ್ತಾಳೆ ಅಂತ. ಆಗೆಲ್ಲ ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗ ಕಾಲ್ ಮಾಡಿ ನಿದ್ದೆಗೆಡಿಸಬೇಡ ಅಂತ ಅವಳನ್ನ ಬೇಡುತಿದ್ದ. ಇವತ್ತು ನಿದ್ದೆಗೆಡಿಸಲು ಅವಳಿಲ್ಲ ಆದರೆ ಏನು ಮಾಡಿದರೂ ಅವಳ ನೆನಪುಗಳು ಮಾಯವಾಗದೆ ಎಸ್ಟೋ ರಾತ್ರಿಗಳು ನಿದ್ದೇನೆ ಇಲ್ಲದೆ ಕಳೆದು ಹೋಗ್ತಾ ಇವೆ. ಯಾರು ಏನೇ ಅದರೂ ಟೈಮ್ ತನ್ನ ನಿಯತ್ತನ್ನು ಮರೆಯೋಲ್ಲ, ಕಾಲಚಕ್ರ ನಿಲ್ಲೋಲ್ಲ. ಮತ್ತೆ ಮುಂಗಾರು ಶುರು ಆಗೋ ಸಮಯ, ಅವಳಿಲ್ಲದೆ ಐಸ್ ಸಪ್ಪೆಯಾಗಿದೆ, ಆಲದ ಮರ ಒಣಗಿ ಹೋಗಿದೆ, ದತ್ತುವಿನ ಜೀವನವೇ ಸತ್ತು ಹೋಗಿದೆ. ಸುರಿಯೋ ಮಳೆಗೆ ಮುಖ ಮಾಡಿ ಒಬ್ಬನೇ ನಿಂತು ಅವಳ ಬರುವಿಕೆಗೆ ಕಾಯ್ತಾ ಇದ್ದಾನೆ ಅವನು. ಮತ್ತೆಂದು ದತ್ತುವನ್ನು ತಿರುಗಿ ನೋಡದಂತ ಮಾಯಾ ಪ್ರಮಂಚದಲ್ಲಿ ಮಾಯವಾಗಿ ಮರೆಯಾದವಳು ಇನ್ನೆಂದು ವಾಪಸು ಬರೋದಿಲ್ಲ ಅಂತ ಗೊತ್ತು ಅವನಿಗೆ, ಆದರೂ ಕಾಯ್ತಾ ಇದ್ದಾನೆ ಯಾಕಂದ್ರೆ, ಕಾಡೋ ಆ ನೆನಪುಗಳ ಕಾಲು ಕಟ್ಟಿ ಹಾಕಲು ಇರೋ ದಾರಿ ಅಂದ್ರೆ ಕಾಯೋದು, ಕಾಯುತ ಕಾಯುತ ತನ್ನನ್ನು ತಾನು ಮರೆಯೋದು, ಅದೇ ಅಲ್ವೇ ಪ್ರೀತಿ.

--ರಾಜಶೇಕರಗೌಡ ಹೋತುರು.
rjgouda@gmail.com
ಬಾಗಲವಾಡ
ರಾಯಚೂರು
7760961477

Thursday, September 30, 2010

ಗೆಳತಿ ಪ್ರೀತಿಸು ನನ್ನ


ಗೆಳತಿ ಪ್ರೀತಿಸು ನನ್ನ

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ನಾನೇನು ಆ ಬೆಳದಿಂಗಳು ಸುರಿಸೋ ಚಂದಿರನನ್ನು
ಹಿಡಿದು ನಿನ್ನ ತಲೆಯಲ್ಲಿ ಕಂಪು ಸೂಸೋ ಮಲ್ಲಿಗೆ ಹೂವಾಗಿಸಿ ಮುಡಿಸಲಾರೆ
ಆದರೆ ನನ್ನ ಜೀವನದ ಕಟ್ಟ ಕಡೆ ಗಳಿಗೆಯವರೆಗೆ ನಿನ್ನ ಪ್ರತಿ ಹೆಜ್ಜೆಗೆ
ಕಮಲದ ದಳಗಳನ್ನು ಹಾಸಿ ಪ್ರೀತಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಹರಿಯೋ ಜಲಪಾತವನ್ನು ಹಿಡಿದು ಮಡಿಸಿ ನಿನ್ನ ಬಳುಕುವ
ಬಳ್ಳಿಯಂತ ದೇಹಕ್ಕೆ ಸೀರೆಯಾಗಿಸಿ ಉಡಿಸಲಾರೆ
ಆದರೆ ನನ್ನ ಎದೆಯ ಕೊನೆ ಉಸಿರಿರುವವರೆಗೆ ಕೆನೆಯಷ್ಟು ಮೃದುವಾಗಿರುವ
ನಿನ್ನ ಚರ್ಮಕ್ಕೆ ಹೊಂಗಿರಣವೂ ಚುಚ್ಚಿ ನೋಯಿಸದಂತೆ ಪ್ರೆಮಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಮಜ್ನುನಂತೆ ಇತಿಹಾಸ ಬರೆವಷ್ಟು ಪ್ರೀತಿಸಲಾರೆ,
ಶಹಜಾನ್ ನಂತೆ ತಾಜ್ಮಹಲ್ ಕಟ್ಟಿ ಎಷ್ಟು ಪ್ರೀತಿಸುತಿದ್ದೆ ಅಂತ ಜಗತ್ತಿಗೆ ತೋರಿಸಲಾರೆ
ಆದರೆ ನೀನು ಎಂಬತ್ತು ವಯಸ್ಸಿನ ಮುದಿಕಿಯಾಗಿ, ಮುಖವೆಲ್ಲ ಸುಕ್ಕುಗಟ್ಟಿ
ನಡೆಯಲು ಆಸರೆ ಬೇಕು ಅಂದಾಗ ನಿನ್ನನ್ನು ನನ್ನೆದೆಗೆ ಗಟ್ಟಿಯಾಗಿ ಅಪ್ಪಿಕೊಂಡು ಮುನ್ನಡೆಸುವೆ.

ಗೆಳತಿ, ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477

ನಾನೇ ನೀನು ನೀನೆ ನಾನು



ನಾನೇ ನೀನು ನೀನೆ ನಾನು

ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ.
ಹೃದಯ ರಕ್ತ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೀತಿಸುತ್ತೆವೆಂದು?
ಹಗಲು ರಾತ್ರಿ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೆಮಿಸುತ್ತೆವೆಂದು?
ಭೂಮಿ ಬಾನು ಎಲ್ಲಿಯಾದರೂ ಬರೆದಿವೆಯಾ ಒಂದಿಲ್ಲದೆ ಏನೂ ಇಲ್ಲ ಎಂದು?
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನಾನು ನೀನು ಅನ್ನೋದೇ ಇಲ್ಲ
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.

ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ.
ಕೆನೆ ಹಾಲಿನಿಂದ ಹುಟ್ಟಿದರೂ ಹೆಲೆಂದಾದರು ಹೇಳಿದೆಯ ನನ್ನಿಂದ ನೀನು ಎಂದು
ಜೇನಹನಿ ಗೂಡಿನಲ್ಲಿ ಬೆಳೆದರೂ ಗೂಡು ಎಂದಾದರು ಕೇಳಿದೆಯ ನನ್ನಿಂದ ನೀನು ಎಂದು
ಬೂದಿ ಬೆಂಕಿಯಿಂದ ಬಂದರು ಬೆಂಕಿ ಎಲ್ಲಾದರೂ ಬೆರಳು ಮಾಡಿ ತೋರಿಸಿದೆಯ ನಾನಿಲ್ಲದೆ ನೀನಿಲ್ಲ ಎಂದು
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನೀನು ಬರುಕಿರುವದಕ್ಕೆ ನನ್ನ ಬದುಕಿದೆ.
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.

--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477

Sunday, September 19, 2010

ಆ ಕೆಂಪು ಮೂಗು

ಹೇ ಮುದ್ದು ಕೋತಿ,

ಹೇಗಿದ್ದೀಯ? ಇನ್ನೂ ನಿನ್ನ ಮೂಗು ಕೆಂಪಗೆ ಇದೆಯಾ? ಅಥವಾ ಜ್ವರ ಕಡಿಮೆ ಆಗಿ ಬಿಳಿಯಾಗಿದೆಯಾ?
ನಿಜ ಹೇಳಲಾ ಚಿನ್ನ, ಕಳೆದ ಮೂರು ದಿನದಿಂದ ನಾನು ನಾನಗೆ ಇಲ್ಲ, ಸರಿಯಾದ ಸಮಯಕ್ಕೆ ಊಟ, ನೀಟಾಗಿ ತೊಳೆದ ಬಟ್ಟೆ, ಇನ್ ಟೈಮ್ ನಲ್ಲಿ ಆಫೀಸ್ ನಲ್ಲಿ ಇರೋ ಶಿಸ್ತಿನ ಶಿಪಾಯಿ ಅಂತ ಕರಿತಿದ್ದೆಯಲ್ಲ ನೀ ನನ್ನ, ಈಗ ನನ್ನ ಸ್ಥಿತಿ ನೋಡಿದರೆ ನೀನು ಎದೆ ಒಡೆದು ಸತ್ತೆ ಹೋಗ್ತೀ ಏನೋ. ಯಾಕೋ ಗೊತ್ತಿಲ್ಲ ಕಣೆ ನೀನು ನಿಂಗೆ ಜ್ವರ ಬಂದಿದೆ ಅಂತ ಮೆಸೇಜ್ ಮಾಡಿದಾಗಿನಿಂದ ನಿನ್ನ ಬಿಟ್ಟು ಬೇರೆ ಏನೂ ಯೋಚೆನೆ ಮಾಡೋಕೆ ಆಗ್ತಾ ಇಲ್ಲ. ನಿಂಗೊತ್ತಾ ನಾನು ನನ್ನ ವಿದೇಶಿ ಸಹೋದ್ದೋಗಿಗಳ ಜೊತೆ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಿನ್ನ ಮೆಸೇಜ್ ಬಂತು, ಒಂದು ಕ್ಷಣ ಬೆವತು ಹೋಗಿ ಏನೂ ಮಾಡಬೇಕು ಅಂತ ತೋಚದೆ ಆ ಮೀಟಿಂಗ್ ಅರ್ಧದಲ್ಲೇ ಬಿಟ್ಟು ಹೊರನಡೆದೆ. ಅದರಿಂದಾಗಿ ಒಂದು ಲಕ್ಷ ಡಾಲರ್ ಕಿಮ್ಮತ್ತಿನ ಪ್ರಾಜೆಕ್ಟ್ ನಮ್ಮ ಕಂಪನಿಯ ಕೈ ಬಿಟ್ಟು ಹೋಯ್ತು, ಮ್ಯಾನೆಜೆರ್ ನನ್ನ ಬೇರೆ ಡಿಪಾರ್ಟ್ಮೆಂಟ್ ಗೆ ವರ್ಗ ಮಾಡಿದ್ದಾನೆ, ಚಿಂತೆ ಇಲ್ಲ ಚಿನ್ನ ನಿನ್ನ ಮುಂದೆ ಈ ಪ್ರಾಜೆಕ್ಟ, ಆ ಕೆಲಸ ಏನು ದೊಡ್ದದಲ್ಲ ಬಿಡು.
ಒಂದಂತೂ ಸತ್ಯ ಕಣೆ, ಮೀಟಿಂಗ್ ಅರ್ಧದಲ್ಲೇ ಬಿಟ್ಟು ನಿನ್ನ ರೂಮಿಗೆ ಬರುವಷ್ಟರಲ್ಲ್ಲಿ ಸಂಜೆ ಸೂರ್ಯ ಮುಳುಗಿ ಗಂಟೆ ಎಂಟಾಗಿತ್ತು. ನೀನು ಆಗಲೇ ಗುಳಿಗೆ, ಟಾನಿಕ್, ಜಂಡೂಭಾಂ ಜೊತೆ ಮಲಗಿದ್ದೆ. ನಿನ್ನ ಹಣೆಗೆ ಕೈಯಿಟ್ಟರೆ ಕೆಂಡದಂತ ಬಿಸಿ, ಗಡ ಗಡ ನಡುಗಿ ನೀ ಮಲಗಿದ ಮಂಚದ ಮೇಲೆ ಕುಳಿತು ನಿನ್ನ ಒಮ್ಮೆ ಗಟ್ಟಿಯಾಗಿ ಎದೆಗಪ್ಪಿಕೊಂಡೆ, ಹೆನ್ನಪ್ಪಿಯಂತೆ ಗಳ ಗಳ ಅಂತ ಅಳಲಿಲ್ಲವದರೂ ನಂಗೆ ಗೊತ್ತಿಲ್ಲದೇ ನನ್ನ ಕಣ್ಣಿಂದ ಎರಡು ಹನಿ ಉದುರಿತ್ತು, ರಾತ್ರಿ ಪೂರ ನಿನ್ನ ತಲೆ ನೀವುತ್ತ, ತಣ್ಣೀರು ಬಟ್ಟೆ ಹಾಕುತ್ತ, ನನ್ನ ಎದೆಮೇಲೆ ಮಲಗಿಸಿಕೊಂಡು ಮುಂಜಾನೆವರೆಗೆ ನಿನ್ನ ಎಚ್ಚರಕ್ಕೊಸರ ಕಾಯುತ್ತ ಇದ್ದೆ. ನೀನು ಎದ್ದು ನನ್ನ ಎದೆಯ ಶರ್ಟ್ ಗುಂಡಿನನ್ನಿ ಸಿಕ್ಕಿ ಹಾಕಿಕೊಂಡಿದ್ದ ನಿನ್ನ ಉದ್ದದ ಕೊದಲ್ಲನ್ನು ಬಿಡಿಸಿಕೊಂಡು ಮೆಲ್ಲನೆ ನಗುತ್ತ ನನ್ನ ಕೆನ್ನೆ ಚೂಟಿದಾಗಲೇ ನಾ ಈ ಜಗತ್ತಿಗೆ ಬಂದಿದ್ದು, ರಾತ್ರಿ ಊಟ ಮಾಡದೇ ನಿದ್ದೆ ಇಲ್ಲದ ನಿನ್ನ ಪಕ್ಕದಲ್ಲೇ ಮಲಗಿದ್ದೆ ಅಂತ ಗೊತ್ತಾಗಿದ್ದು. ನಿನ್ನ ಮುಖ ಮೊದಲಿನ ತರಾ ಕಿಲ ಕಿಲ ಅಂತ ಇರ್ಲಿಲ್ಲ ಆದರೋ ಆ ಸಣ್ಣ ನಗು ನೋಡಿ ಸಣ್ಣಗೆ ಸಮಾದಾನ ಆಯ್ತು. ಪ್ರೀತಿಸಿದವಳನ್ನು ರಾತ್ರಿ ಪೂರ್ತಿ ಎದೆ ಮೇಲೆ ಮಲಗಿಸಿಕೊಂಡು ಹಾರೈಕೆ ಮಾಡಿದ ಆ ಅನುಭವ ಏನೋ ಒಂದು ತರಾ ಕುಶಿ ಕೊಡ್ತಾ ಇತ್ತು, ಹಾಗೆ ನಂಗೂಸ್ಕರ ಒಂದು ಜೀವ ಇದೆ ಅಂತ ನನ್ನೊಳಗೆ ನಾನೇ ಬೆನ್ನು ತಟ್ಟಿಕೊಳ್ಳುತ್ತ ಇನ್ನು ಮುಂದೆ ಜೀವನದಲ್ಲಿ ಜವಬ್ದಾರಿಯಿಂದ ನಡೀಬೇಕು ಅಂತ ಅನ್ನುಸೋಕೆ ಸುರುವಾಯ್ತು. ಅದೇನೋ ಗೊತ್ತಿಲ್ಲ ಕಣೆ ಹಿಂದೆಲ್ಲ ಈ ಗುಳಿಗೆ, ಟಾನಿಕ್, ಜಂಡೂಭಾಂ ವಾಸನೆ ಕಂಡರೆ ವಾಕರಿಕೆ ಬರ್ತಾ ಇತ್ತು , ಅಜ್ಜಿ ತನ್ನ ಕಾಲಿಗೆ ಜಂಡೂಭಾಂ ಅಚ್ಚಿಕೊಂಡು ಕೊತಿದ್ದರೆ ಅವಳ ಹತ್ತಿರ ಕೂಡ ಹೋಗ್ತಾ ಇರ್ಲಿಲ್ಲ, ಆದ್ರೆ ನಿನ್ನ ತಲೆಗೆ ನಾನೇ ಜಂಡೂಭಾಂ ಹಚ್ಚಿ ಎದೆಮೇಲೆ ಮಲಗಿಸಿಕೊಂದೊದ್ದರೂ ನಂಗೆ ಏನೂ ಅನ್ನಿಸಲೇ ಇಲ್ಲ. ನೆನೆಸಿಕೊಂಡರೆ ನಂಗೆ ನಗು ಬರ್ತಾ ಇದೆ ಪ್ರೀತಿಯಂದರೆ ಇದೇನಾ ಅಂತ. ಅಲ್ಲಿವರೆಗೆ ಟೆನ್ಶನ್ನಲ್ಲಿ ಇದ್ದ ನಂಗೆ ಒಮ್ಮ್ಲೆಗೆ ಹೊಟ್ಟೆ ಹುನ್ನಗುವಸ್ಟು ನಗು ಬಂದಿದ್ದು ನಿನ್ನ ಆ ಕೆಂಪು ಮೂಗು ನೋಡಿ. ನಿಂಗೆ ಜ್ವರ ಬಂದಾಗ, ನೆಗಡಿ ಆದಗ ಮೂಗು ಕೆಂಪಗೆ ಆಗುತ್ತಲ್ಲ, ಅದು ನಿಂಗೆ ಮುಜುಗರ ತಂದರೂ ನಂಗೆ ನೀ ಸುಂದರವಾಗೇ ಕಾಣುತ್ತೀಯ ಕಣೆ.
ಅಲ್ಲಿವರೆಗೋ ಇದ್ದ ಆ ಸಮಾದಾನ, ನಗು, ಆ ಫೀಲಿಂಗ್ ಒಮ್ಮೆಗೆ ಚೂರು ಚೂರು ಆಗಿದ್ದು ನಿನ್ನ ತಂದೆ ನಿನ್ನನ್ನು ಊರಿಗೆ ಕರೆದುಕೊಂಡು ಹೋಗಲು ಬಂದಾಗ. ವಲ್ಲದ ಮನಸ್ಸಿಂದ ನೀನು ಹೊರಡಲು ನಿಂತಿದ್ದೆ, ಇಲ್ಲದ ಮನಸ್ಸಿಂದ ಕಳಿಸಲು ನಾನು ಕುಳಿತಿದ್ದೆ. ಇವತ್ತಿಗೆ ನೀನು ನಿನ್ನೂರು ಸೇರಿ ಒಂದು ವಾರ ಕಳೆಯಿತು ಚಿನ್ನ, ಒಂದು ಕಾಲ್ ಇಲ, ಮೆಸೇಜ್ ಇಲ್ಲ, ನೀನಿಲ್ಲದೆ ನಿನ್ನ ನೆನಪಿನ ಜೊತೆ ಜೋಕಾಲಿ ಆಡಿ ಸಾಕಾಯ್ತು ಕಣೆ. ಬೇಗ ಬಾ, ಕಡೆ ಪಕ್ಷ ಕಾಲ್ ಮಾಡು, ನಿನ್ನ ಮೂಗು ಹೇಗಿದೆ ಅಂತ ತಿಳಿಸು. ನಿನಗೋಸ್ಕರ ಕಾದಿರುವ ನಿನ್ನ ಹುಡುಗ.


-Rajashekara Gouda
rjgouda@gmail.com
7760961477

Sunday, September 5, 2010

ಪ್ರೀತಿಯ ಕರೆ

ನಿನ್ನ ಕರೆದಷ್ಟು ಬಾರಿ ಆ ದೇವರನ್ನೂ ಕರೆದಿಲ್ಲ
ಗೆಳತಿ, ನೀ ದೇವರಿಗಿಂತ ದೊಡ್ಡವಳಾ? ಅದು ನನಗೆ ಗೊತ್ತಿಲ್ಲ.

ನಿನ್ನ ನೆನೆದಷ್ಟು ಬಾರಿ ನನ್ನ ನಾನೇ ನೆನೆದಿಲ್ಲ
ಗೆಳತಿ, ನೀನಿಲ್ಲದೆ ನಾನಿಲ್ಲ, ಅದು ನಿನಗೆ ಗೊತ್ತಿಲ್ಲ.

ನಿನ್ನೊಂದಿಗಿನ ನನ್ನ ಒಡನಾಟ ನಿನಗೆ ಬರಿ ಸಲುಗೆ
ನನಗದು ನೀ ಸಿಕ್ಕರೆ ಒಲವು, ಗೆಲುವು, ಇಲ್ಲದಿದ್ದರೆ ಅದು ಸುಲಿಗೆ.

ಒಮ್ಮೊಮ್ಮೆ ಅನಿಸುತಿದೆ ಬಿಕ್ಕಿ ಬಿಕ್ಕಿ ಅತ್ತು ಬಿಡಲೇ ಎಂದು
ಕಣ್ಣ ಕೆರೆಯ ನೀರೆಲ್ಲ ಬತ್ತಿದೆ, ಕಣ್ಣೀರು ಕೂಡ ಬರದಿಂದು.

ನೀ ಬರುವ ಬಾಗಿಲುಗಳೆಲ್ಲ ಮುಚ್ಚಿ ಮುಳುಗಿವೆ
ಆದರೂ ಕಾಯುತಿರಿವೆ ನೀ ಬರುವೆ ಎಂದು.

ಬಂದು ಬಿಡು ಗೆಳತಿ ಎಲ್ಲ ಬಂಧಗಳ ಬಿಟ್ಟು
ನೀನಿಲ್ಲದೆ ದಿನವೂ ಸಾಯಿತಿರುವೆ, ಉಳಿಸು ನನ್ನ ದಯವಿಟ್ಟು.

ನಿನ್ನ ನೆನೆದಷ್ಟು ಬಾರಿ ನನ್ನ ನಾನೇ ನೆನೆದಿಲ್ಲ
ಗೆಳತಿ, ನೀನಿಲ್ಲದೆ ನಾನಿಲ್ಲ, ಅದು ನಿನಗೆ ಗೊತ್ತಿಲ್ಲ.

ನಿನ್ನ ಕರೆದಷ್ಟು ಬಾರಿ ಆ ದೇವರನ್ನೂ ಕರೆದಿಲ್ಲ
ಗೆಳತಿ, ನೀ ದೇವರಿಗಿಂತ ದೊಡ್ಡವಳಾ? ಅದು ನನಗೆ ಗೊತ್ತಿಲ್ಲ.

-Rajashekar Gouda Hotur
rjgouda@gmail.com

Saturday, August 28, 2010

ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ : ರಾಕೆಟ್ ಮತ್ತೆ ಮೇಲೇರುತ್ತದೆ, ಆದರೆ ನಮ್ಮ ಸ್ವಾಭಿಮಾನ ಏಳುವುದು ಯಾವಾಗ?

ಗೆಳೆಯರೇ
ಕೆಳಗೆ ಪ್ರಕಟಿಸಿದ ಈ ಲೇಖನ ವಿಜಯ ಕರ್ನಾಟಕದಲ್ಲಿ ಏಪ್ರಿಲ್ ೨೦ ರಂದು ಪ್ರಕಟವಾಗಿದ್ದು ಅದನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.


ಗೆಳೆಯರೇ
ಕೆಳಗೆ ಪ್ರಕಟಿಸಿದ ಈ ಲೇಖನ ವಿಜಯ ಕರ್ನಾಟಕದಲ್ಲಿ ಏಪ್ರಿಲ್ ೨೦ ರಂದು ಪ್ರಕಟವಾಗಿದ್ದು ಅದನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.

'ತಾನೊಂದು ಬಗೆದರೆ ದೈವವೊಂದು ಬಗೆದಂತೆ' ಇದು ನಮ್ಮ ಇಸ್ರೋದ ಇವತ್ತಿನ ಗತಿ. 1992 ರಲ್ಲಿ ರಷ್ಯ ದೇಶದಿಂದ ಭಾರತಕ್ಕೆ ಬರಬೇಕಿದ್ದ cryogenic ಟೆಕ್ನಾಲಜಿಯನ್ನು ವಿಶ್ವದ ದೊಡ್ಡಣ್ಣ ಅಮೆರಿಕದ ಸಣ್ಣ ಬುದ್ದಿ, ಕ್ಷಮಿಸಿ ಚಿಲ್ಲರೆ ಬುದ್ಧಿಯಿಂದಾಗಿ ತಪ್ಪಿ ಹೋಗಿತ್ತು. ಆದರೆ ಭಾರತದ ವಿಜ್ಞಾನಿಗಳೇನು ಸಮಾನ್ನೆರೆ? ಅದನ್ನೇ ಒಂದು ಸವಲನ್ನಾಗಿ ಸ್ವೀಕರಿಸಿ ಅವತ್ತು ರಷ್ಯದಿಂದ ಬರಬೇಕಿದ್ದ ಅದೇ ತಂತ್ರಜ್ಞಾನವನ್ನ 15 ವರ್ಷಗಳ ಪರಿಶ್ರಮ, ಬೆವನಿರಿಂದ ನಮ್ಮ ನೆಲದಲ್ಲೇ ತಮ್ಮ ಬುದ್ದಿವಂತಿಕೆಯಿಂದ ತಯಾರಿಸಿ ನಮ್ಮ ಬಗ್ಗೆ ಹಗುರವಾಗಿ ಮಾತಾಡುವವರಿಗೆ ಸರಿಯಾದ ಪಾಠ ಕಲಿಸಿ ನಮ್ಮ ಶಕ್ತಿ ಏನು ಅನ್ನೋದನ್ನ ಜಗತ್ತಿಗೆ ತೋರಿಸಿದ್ದಾರೆ ನಮ್ಮ ಇಸ್ರೋ ವಿಜ್ಞಾನಿಗಳು. ಆದರೆ ಇಷ್ಟೆಲ್ಲಾ ಕಸರಿತ್ತಿನ ಮದ್ದೆ ಮೊನ್ನೆ ನಡೆದ GSLV -D3 ರಾಕೆಟ್ ಉಡಾವಣೆ ವಿಫಲವಾಗಿದ್ದು ಸ್ವಲ್ಪ ಕೆದಕರವೆನಿಸುತ್ತಿದೆ. ಆದರೋ ಇಸ್ರೋದ ಸಾಧನೆ, ಸಾಮರ್ಥದ ಬಗ್ಗೆ ಎರಡು ಮಾತಿಲ್ಲ. ದೇಶದ ಅರ್ಥ ವ್ಯವಸ್ತೆ, ಆರೋಗ್ಯ ವ್ಯವಸ್ತೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ ಕಾಣಲು ಕಾರಣಿಕರ್ತ ಈ ಇಸ್ರೋ, ಈ mission ಸಫಲವಾಗಿದ್ದರೆ cryogenic ಟೆಕ್ನಾಲಜಿಯನ್ನು ಹೊಂದಿದ ಪ್ರಪಂಚದ ಐದು ರಾಷ್ಟ್ರಗಳಾದ ಅಮೇರಿಕ, ರಷ್ಯ, ಜಪಾನ್, ಫ್ರೆಂಚ್ ಮತ್ತು ಚೀನಾದಂತ ದೇಶಗಳ ಸಾಲಿಗೆ ನಮ್ಮ ದೇವಶವೂ ಸೇರುತ್ತಿತು ಅಷ್ಟೇ ಅಲ್ಲ ಇವತ್ತಿನ TV, ಮೊಬೈಲ್ ಇಂಟರ್ನೆಟ್ ಬಳಕೆಯ ದಿಕ್ಕೇ ಬದಲಾಗುತ್ತಿತು. ISRO ಹೇಳಿಕೊಂಡಂತೆ GSLV -D3 ಉದ್ದೇಶ ಅಧುನಿಕ ತಂತ್ರಜ್ಞಾನವನ್ನ್ನು ಭಾರತದ ಪ್ರತಿ ಹಳ್ಳಿಯ ಪ್ರತಿ ಮನೆಗೆ ಒಯ್ಯಿಯೋದೆ ಆಗಿತ್ತು. GSLV -D3 ಯಿಂದಾಗಿ ದೇಶದ ಯಾವುದೇ ಮೂಲೆಯಿಂದ ಇಂಟರ್ನೆಟ್ ಬಳಕೆ ಮಾಡಬಹುದಿತ್ತು, ಜನರ ಜೀವನ ಹಾಸು ಹೊಕ್ಕಾಗಿರುವ ಮೊಬೈಲ್ ಮೂಲಕ ಎಲ್ಲೋ ನಡೆದ ಕ್ರಿಕೆಟನ್ನು ಲೈವ್ ಆಗಿ ಹಾಗು ಸ್ಪಷ್ಟ ಚಿತ್ರ ಮತ್ತು ದ್ವನಿಯಲ್ಲಿ ನೋಡಬಹುದಿತ್ತು. ಇಂತ ಮಹಾ ಯೋಜನೆಯ ಕನಸು ಇಸ್ರೋಗೆ ಕನಸು ನನಸಾಗದೆ ಇರೋದಕ್ಕೆ ತುಂಬಾ ನಿರಾಸೆಯಾಗಿದೆ.



ಆದರೆ ಇದಕ್ಕಿಂತ ಭ್ರಮ ನಿರಶನ ಆಗೋದು ನಮ್ಮ ಜನರ, ರಾಜಕಾರಣಿಗಳ, ಮಾದ್ಯಮದ ವರ್ತನೆ ಮತ್ತು ತಿಳುವಳಿಕೆಯನ್ನು ನೋಡಿದಾಗ. ಎಷ್ಟು ಜನಕ್ಕೆ ಏಪ್ರಿಲ್ 15 ರ ಸಾಯಂಕಾಲ GSLV -D3 ರಾಕೆಟ್ ಉಡಾವಣೆ ಇದೆ ಅನ್ನೋದು ಗೊತ್ತಿತ್ತು? ಉಡಾವಣೆ ವಿಫಲ ಅದ ನಂತರ ನನ್ನ ಮಿತ್ರರಿಗೆ ಅದರ ಬಗ್ಗೆ ಹೇಳಿದೆ. ಅವರ ಪ್ರತಿಕ್ರಿಯೆ ಕೇಳಿ ರೋಶಿ ಹೋದೆ. ಒಬ್ಬ ಹೇಳಿದ 'ಭಾರತದ ವಿಜ್ಞಾನಿಗಳ ಹಣೆ ಬರಹನೆ ಇಷ್ಟು, ಏನು ಸಾದಿಸೊಲ್ಲ, ನಮ್ಮವರು ತಯಾರು ಮಾಡಿದ್ದಕ್ಕೆ ರಾಕೆಟ್ ವಿಫಲ ಆಯಿತು, ಅದೇ ಅಮೇರಿಕ ಇಲ್ಲ ಜಪಾನ್ ನವರು ತಯಾರಿಸಿದ್ದರೆ ಕಂಡಿತ success ಅಗ್ತಾ ಇತ್ತು' . ಇದು ಬರೀ ನನ್ನ ಮಿತ್ರನ ಮಾತಲ್ಲ ಬಹುತೇಕರು ಇದೆ ರೀತಿ ಮಾತಾಡ್ತಾ ಇದ್ದಾರೆ. ಒಂದು ಕ್ಷಣ ನಮ್ಮ ಬಗ್ಗೆ ನಮಗೆ ಗೌರವ ಇಲ್ಲದೆ ನಾಯಿಗಿಂತ ಕೀಳಾಗಿ ಜೀವನ ಮಾಡುತ್ತಿರು ಮನುಷ್ಯರು ನಾವು ಅನ್ನಿಸಿತು. ಒಂದು ಅರ್ಥ ಮಾಡಿಕೊಳ್ಳಬೇಕು ಇವತ್ತು ನಾವು ಮಾಹಿತಿ ತಂತ್ರಜ್ಞಾದಲ್ಲಿ ಮುಂದುವರೆದು ಸಾವಿರಾರು ಕಂಪನಿಗಳು ಹುಟ್ಟಿ. ನನ್ನಂತ ಲಕ್ಷಾಂತರ ಮದ್ಯಮ ವರ್ಗದ ಹುಡುಗರು ಸಾಫ್ಟ್ವೇರ್ ಇಂಜಿನಿಯರ್ ಆಗಿ ತಮ್ಮ ತಮ್ಮ ಅಪ್ಪ ಅಮ್ಮನ್ನ ನೆಮ್ಮದಿಯಿಂದ ನೋಡಿಕೊಳ್ತಾ ಇದ್ದೇವೆ ಅಷ್ಟೇ ಅಲ್ಲ ಹೊರ ದೇಶಕ್ಕೆ ಹೋಗಿ ಬರಬೇಕು ಅಂತ ಕನಸು ಕಾಣತಿದ್ದೇವೆ ಅಂದರೆ ಅದಕ್ಕೆಲ್ಲ ಮುಖ್ಯ ಕಾರಣ ಅಮೆರಿಕದಿಂದ ಇಲ್ಲವೇ ಇಂಗ್ಲೆಂಡಿನಿಂದ ಬರುವ ಡಾಲರ್ ದುಡ್ಡಲ್ಲ, ನಮ್ಮ ಇಸ್ರೋದ ಶ್ರಮ.

ಇನ್ನು ಮಾದ್ಯಮದ ಬಗ್ಗೆ ಹೇಳಬೇಕೆಂದರೆ ಹೇಳಲು ಮಾತೆ ಬರೋಲ್ಲ. ರಸಿಕ ನಿತ್ಯಾನಂದ ಸ್ವಾಮಿಯ ರಾಸಲೀಲೆಯನ್ನು ಮತ್ತೆ ಮತ್ತೆ ಗಂಟೆ ಗಟ್ಟಲೆ ಪ್ರಸಾರ ಮಾಡುತ್ತವೆ, ನಾಲ್ಕು ಐದು ಮಂದಿಯನ್ನು ಕೂಡಿಸಿಕೊಂಡು ದಿನಗಟ್ಲೆ ಚರ್ಚೆ ನಡೆಸುತ್ತವೆ, IPL ಮ್ಯಾಚ್ ಗಳ ನೇರ ಪ್ರಸಾರ ಮಾಡುತ್ತವೆ, ಹುಡುಗಾಟ ಹಾಡುವ ಲಲಿತ್ ಮೋದಿಯ ಮತ್ತು 50 ವಸಂತಗಳನ್ನ ಕಳೆದರೂ maturity ಇಲ್ಲದಂತೆ ಮಾತಾಡೋ ಶಶಿ ತರೂರ್ ಮೋಜಿನ ಆಟಕ್ಕೆ ಬಣ್ಣ ಬಳಿದು ರಂಗು ರಂಗಾಗಿ Telecast ಮಾಡುತ್ತವೆ. ರಾಕಿ ಸಾವಂತ, ರಾಹುಲ್ ಮಹಾಜನ್, ಪಕಾ ಪಕಾ ಅಂತ ನಗುವ ನವಜೋತ್ ಸಿಂಗ್ ಸಿದ್ಧುವಿನ ಕಾರ್ಯಕ್ರಮಕ್ಕೆ ಅದ್ದೂರಿ ಸೆಟ್ ಹಾಕಿ ಬೇರೆ ಬೇರೆ ಆಯಾಮಗಳಲ್ಲಿ ಶೂಟ್ ಮಾಡಿ ತೋರಿಸುತ್ತಾರೆ ಆದರೆ ರಾಕೆಟ್ ಉಡಾವಣೆ ಬಗ್ಗೆ ಐದು ನಿಮಿಷಕ್ಕಿಂತ ಹೆಚ್ಚಿನ ಸುದ್ಧಿ ಬಿತ್ತರ ಮಾಡೋದಿಲ್ಲ. ಬೆರಳೆಣಿಕೆಯ ಪತ್ರಿಕೆಗಳನ್ನ ಬಿಟ್ಟರೆ ಯಾವೊಂದು ಪತ್ರಿಕೆ ಒಂದು ಪುಟ ಬಿಡಿ ಅರ್ಧ ಪುಟದಷ್ಟು GSLV -D3 ರಾಕೆಟ್ ಉಡಾವಣೆಯ ಮಾಹಿತಿಯನ್ನು ಪ್ರಕಟಿಸಿವೆ ಹೇಳಿ?

ನಮ್ಮ ರಾಜಕಾರಣಿಗಳೋ, ಅವರಿಗೆ ತಮ್ಮ ಕುರ್ಚಿಯನ್ನು ಹೇಗೆ ಉಳಿಸಿಕೊಳ್ಳಬೇಕು, ಎಲ್ಲೆಲ್ಲಿ ಹೇಗೆ ಎಲೆಕ್ಷನ್ ಮಾಡಬೇಕು, ಯಾವ ಕಳ್ಳನಿಗೆ ಸುಳ್ಳನಿಗೆ ಟಿಕೆಟ್ ಕೊಡಬೇಕು, ಎಷ್ಟು ಹಣವನ್ನು ಸುರೀಬೇಕು ಹೇಗೆ ಅದಕ್ಕಿಂತ ಎರಡರಷ್ಟು ದುಡ್ಡು ಹೇಗೆ ಮಾಡಬೇಕು, ಎದುರಿಗಿನ ಪಕ್ಷದ ಮೇಲೆ ಹೇಗೆ ಕೆಸರು ಎರಚಬೇಕು ಅಂತ ಯೋಚನೆ ಮಾಡೋದಕ್ಕೆ ಟೈಮ್ ಇಲ್ಲ ಇನ್ನು ದೇಶದ, ಇಸ್ರೋದ ಬಗ್ಗೆ ಆಲೋಚನೆ ಮಾಡಲು ಅಗುತ್ತಾ? ಇವತ್ತು ಎಷ್ಟೋ ನಮ್ಮ ರಾಜಕಾರಣಿಗಳಿಗೆ ಇಸ್ರೋದ long form ಬಿಡಿ ಅದು ನಮ್ಮ ದೇಶದಲ್ಲಿ ಇದೆಯಾ, ಅದು ಏನು ಮಾಡ್ತಾ ಇದೆ ಅನ್ನೋದೇ ಗೊತ್ತಿಲ್ಲ.

ಇನ್ನು ನಮ್ಮ ಯುವಕರು, ವಿದ್ಯಾವಂತ ಯುವಕರು ಕೆಲಸ, ಪ್ರೀತಿ, ಪ್ರೇಮ, ಪುಬ್, ಮ್ಯಾಚ್ ಅಂತ ಅದರಲ್ಲೇ ಬ್ಯುಸಿ, ಹಳ್ಳಿಯ ಜನ ಚೈನಾದ ಮೊಬೈಲ್ನಲ್ಲಿ ಜನಪದ ಗೀತೇನೋ, ಬಜನೇ ಪದನೋ ಹಾಕಿಕೊಂಡು ಕೇಳೋದರಲ್ಲಿ ಬ್ಯುಸಿ, ನಮ್ಮ ಯುತಿಯರು ಗೊಳೋ ಅಂತ ಕಣ್ಣೀರು ಹಾಕುವ ವರ್ಷಾನು ವರ್ಷ ಬರುವ ಕಿರಿ ಕಿರಿ ಮೇಗ ಧಾರಾವಾಹಿನ ಕಷ್ಟ ಆದರೂ ಇಷ್ಟ ಪಟ್ಟು ನೋಡ್ತಾರೆ ಹೊರತು ಇಸ್ರೋದ ರಾಕೆಟ್ launch ನೋಡಿ ಟೈಮ್ ವೇಸ್ಟ್ ಮಾಡೋಲ್ಲ.

ಯಾರು ತಮ್ಮತ್ತ ಗಮನ ಹರಿಸಿದರು ಬಿಟ್ಟರೂ, ಅವರ ಬಗ್ಗೆ ಜನ ತಿಳಿದುಕೊಂಡು ವಿಜ್ಞಾನಿಗಳನ್ನು ನಿಜ ಜೀವನದ ಹೀರೋಗಳು ಅಂತ ಅಂದುಕೊಂಡರೂ ಬಿಟ್ಟರೂ ತಮ್ಮ ಕೆಲಸನ ತಾವು ಮಾಡೇ ಮಾಡ್ತಾರೆ, ದೇಶದ ಭವಿಷ್ಯವನ್ನು ಉತ್ತಮ ರೀತಿಯಲ್ಲೇ ರೂಪಿಸುತ್ತಾರೆ. ಆದರೆ ಒಂದು ವಿಷಯ ಅಂದ್ರೆ ಜನಗಗಳಲ್ಲಿ ಇಸ್ರೋ ಮತ್ತು ಅದರ ಬಗ್ಗೆ ತಿಳುವಳಿಕೆ ಬಂದು, ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಾಮುಕ್ಯತೆ ಪಡೆದರೆ ಅದು ನಮ್ಮ ಎಮ್ಮೆ ತೊಗಲಿನ ರಾಜಕಾರಿಣಿಗಳಿಗೆ ತಟ್ಟಿ ಇಸ್ರೋಗೆ ಹೆಚ್ಚು ಹೆಚ್ಚು ಪ್ರಯೋಗ ಮಾಡಲು ಅವಕಾಶ ಕೊಡ್ತಾರೆ, ಆ ಮೂಲಕ ವಿಫಲ ಆದರೂ ಸಫಲ ಆದರೂ ನಮ್ಮ ಇಡೀ ದೇಶದ ಜನ ನಮ್ಮ ಜೊತೆ ಇದ್ದಾರೆ ಏನೂ ಆತ್ಮ ಶ್ತೈರ್ಯ ಇಸ್ರೋಗೆ ಇರುತ್ತೆ, ಮತ್ತೆ ಮುನ್ನುಗ್ಗುತ್ತೆ.

ಫೈನಲ್ ಮ್ಯಾಚ್ ನಲ್ಲಿ ಭಾರತ ಗೆದ್ದು ಬರಿಲಿ ಅಂತ ಪೂಜೆ ಹೋಮಗಳನ್ನು ಮಾಡೋ ರೀತಿ ನಮ್ಮ ಜನ ರಾಕೆಟ್ ಉಡಾವಣೆ ಸಮಯದಲ್ಲಿ ಪೂಜೆ ಹೋಮಗಳನ್ನ ಮಾಡಬೇಕು, ಉಡಾವಣೆ ಯಸಸ್ವಿ ಆದರೆ ತಮ್ಮ ಮನೆಯ ಹಬ್ಬದಂತೆ ಹೋಳಿಗೆ ಮಾಡಿಕೊಂಡು ಹುಂಡು ಸಂಬ್ರಮಿಸಬೇಕು, ವಿಫಲ ಆದ್ರೆ ದೂರದ ಯಾವುದೋ ಸಂಬಂದಿ ತೀರಿ ಹೋದ ದುಖ: ಮನಸಲ್ಲಿ ಮನೆಯಲ್ಲಿ ಮಡುಗಟ್ಟಬೇಕು, ಹಾಗೆ ಎಷ್ಟೇ ವಿಫಲವಾದ್ರೂ ಇಸ್ರೋನಲ್ಲಿ ನಂಬಿಕೆ ಇಟ್ಟು ಸಕ್ಸಸ್ ಗಾಗಿ ಹರಿಸಬೇಕು, ಹರಿಸಬೇಕು ಆಗ ನಮ್ಮ ಭಾರತ ದೇಶದಲ್ಲಿ ಇಸ್ರೋದಂತ ನೂರಾರು ಸಂಸ್ತೆಗಳು ಹುಟ್ಟುತ್ತವೆ, ದೇಶದ ಉದ್ಧಾರಕ್ಕಾಗಿ ದುಡಿಯುತ್ತವೆ. ಅಂತ ಕಾಲ ಯಾವತ್ತು ಬರುತ್ತೋ ಕಾದು ನೋಡಬೇಕು.

-ರಾಜಶೇಕರಗೌಡ ಹೋತುರ್, ಬಾಗಲವಾಡ
ರಾಯಚೂರು
rjgouda@gmail.com
9900216597

ನಮ್ಮ ಜೀವಂತ ಶವಗಳ ಮೇಲೆ ನಿಮ್ಮ ಕೈಗಾರಿಕೆಯ ಸಮಾದಿ ಕಟ್ಟದಿರಿ.

ಅದೊಂದು ಪುಟ್ಟ ಸಂಸಾರ ಗಂಡ, ಹೆಂಡತಿ ಮತ್ತು ಮಗು. ಇರುವ ಎರಡು ಎಕರೆ ಭೂಮಿಯಲ್ಲಿ ಹಗಲು ಸುಡು ಬಿಸಿಲಿನಲ್ಲಿ ದೇಹ ಕರಕಲಾಗಿಸಿ ದುಡಿದು ಅವತ್ತಿನ ಹಿಟ್ಟು ತರುವ ಗಂಡ, ತಂದ ಹಿಟ್ಟನ್ನೇ ಪ್ರೀತಿಯಿಂದ ಅಡುಗೆ ಮಾಡಿ ತನ್ನ ಒಡಲು ಪೂರ್ತಿ ತುಂಬದಿದ್ದರೂ ಮಗನ ಹೊಟ್ಟೆಗೆ ಹಾಕಿ ಅವನ ಭವಿಷ್ಯದ ಬಗ್ಗೆ ಕನಸು ಕಟ್ಟಿ, ಇಂದಲ್ಲ ನಾಳೆ ತನ್ನ ಮಗ ದೊಡ್ಡವನಾಗಿ ಚೆನ್ನಾಗಿ ಓದಿ ಈ ಧರಿದ್ರ ಜೀವನದಿಂದ ಮುಕ್ತಿ ದೊರೆಕಿಸುವಂತೆ ಮಾಡು ಎಂದು ಮೂರೊತ್ತು ದೇವರಿಗೆ ಕೈ ಮುಗಿವುವ ತಾಯಿ. ಇಷ್ಟ ಇಲ್ಲದಿದ್ದರೂ ವಿಧಿ ಇಲ್ಲದೆ ತೊಟ್ಟ ಒಂದು ಜೊತೆ ಬಟ್ಟೆಯಲ್ಲಿ ಶಾಲೆಗೇ ಹೋಗಿ, ಗೆಳೆಯರ ಜೊತೆ ದಿನವೂ ಮೂದಲಿಸಿಕೊಂಡು ಬರುವ ಮಗ. ಇಂತ ಸಂಧರ್ಭದಲ್ಲಿ ಯಾವುದೋ ಸರ್ಕಾರ ಇನ್ನಾವುದೋ ಪಾಲಿಸಿ ತಂದು, ಎಲ್ಲೋ ಇರುವವರನ್ನು ಉದ್ಧಾರ ಮಾಡಲು ಹೋಗಿ ಇರವ ಎರಡು ಎಕರೆ ಭೂಮಿಯನ್ನು ಈ ರೈತನಿಂದ ಕಿತ್ತಿಕೊಂಡು ಬಿಟ್ಟರೆ ಏನು ಗತಿ?. ಸರ್ಕಾರ ಕೊಡುವ ಪರಿಹಾರ ಧನ ಒಂದೆರಡು ವರ್ಷ ಸುಖವಾಗಿ ಇಡಲು ಸಾಕಾದೀತು, ಆದರೆ ಜೀವನ ಕಟ್ಟಿ ಕೊಟ್ಟಿದ್ದ ಭೂಮಿಯನ್ನು ಮರಳಿ ಪಡೆಯಲು ಸಾದ್ಯವೆ? ಜೀವನವೇ ಕಮರಿದ ಮೇಲೆ ಜೀವಿಸಲು ಸಾದ್ಯವೆ? ಪರಿಣಾಮ ಆ ರೈತ ಇದ್ದು ಸತ್ತಂತೆ ಜೀವಿಸುವದಕಿಂತ ಸಾಯುದೆ ಮೇಲೆಂದು ನಿರ್ಧರಿಸಿ, ಇನ್ನೂ ಜಗತ್ತನ್ನೇ ಸರಿಯಾದ ಅರಿಯದ ಮಗು ಬೇಡ ಬೇಡ ಅಂತ ಕೈ ಮುಗಿದು ಪರಿ ಪರಿ ಅಂಗಲಾಚುತಿದ್ದರೂ ಬೇರೆ ದಾರಿ ಕಾಣದೆ ಅವನು ತಿನ್ನುವ ಅನ್ನಕ್ಕೆ ವಿಷಯಿಟ್ಟು, ಜೀವ ಕೊಟ್ಟ ಮಗನಿಗೆ ಜೀವನ ಕೊಡದೆ ಕಣ್ಣ ಮುಂದೆ ಸಾಯಿಸಿದ ನೋವು ಕಣ್ಣೀರಾಗಿ ಕಪಾಳದ ಮೇಲೆ ಬರುತ್ತಿರುವಾಗಲೇ ಹೆಂಡತಿಗೆ ಒಂದು ಹಗ್ಗ ಕೊಟ್ಟು ತಾನು ನೇಣು ಬಿಗಿದು ಕೊಂಡು ಇಹ ಲೋಕ ತ್ಯಜಿಸುತ್ತಾನೆ. ಇದು ಒಂದು ಸಣ್ಣ ಘಟನೆ ಮಾತ್ರ ಆದರೆ ಇವತ್ತು ಕೈಗಾರಿಕೆಯ ಹೆಸರಲ್ಲಿ ಸರಕಾರ ಒಕ್ಕಲೆಬ್ಬಿಸಿದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂತ ಸಾವಿರ ಸಾವಿರ ದೃಶ್ಯ ಕಂಡು ಬರುತ್ತವೆ.

ಒಂದು ರಾಜ್ಯ, ಒಂದು ದೇಶ ಅಭಿವೃದ್ಧಿ ಹೊಂದಿ ವಿಶ್ವದ ಭೂ ಪಟದಲ್ಲಿ ತನ್ನ ಸ್ಥಾನ ಗುರುತಿಸಿಕೊಳ್ಳಲು ಕೈಗಾರಿಕೆಗಳ ಸ್ತಾಪನೆ ಅಗತ್ತ್ಯ. ಬರಿ ಅಭಿವೃದ್ಧಿ ಅಷ್ಟೇ ಅಲ್ಲ ಆ ದೇಶದ ಜನರಿಗೆ ಕೈ ತುಂಬ ಕೆಲಸ ಕೊಟ್ಟು, ಅವರ ಜೀವನ ಸುಖಕರವಾಗಿಸಲೂ ಕೈಗಾರಿಕೆ ಅತ್ತ್ಯಗತ್ತ್ಯ. ಇಂತ ಒಂದು ಪ್ರಯತ್ನ ನಮ್ಮ ಕರ್ನಾಟಕ ಸರಕಾರದಿಂದ 'ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ' ದ ಹೆಸರಲ್ಲಿ ಜೂನ್ 3 ಮತ್ತು 4 ರಂದು ಬೆಂಗಳೂರಿಲ್ಲಿ ನಡೆದದ್ದು ಶ್ಲಾಘನೀಯ.
ವಿಶ್ವದ ಎಲ್ಲ ಹೂಡಿಕೆದಾರರು ಇದರಲ್ಲಿ ಬಾಗವಸದೆ ಇದ್ದರೂ ದೇಶದ ಮತ್ತು ವಿದೇಶದ ಕೆಲವು ಪ್ರಮುಖ ಬಂಡವಾಳ ಹೂಡಿಕೆದಾರರನ್ನು ಒಂದೇ ಸೂರಿನಡಿ ತಂದು ಸುಮಾರು ನಾಲ್ಕು ಲಕ್ಷ ಕೋಟಿಯ ರುಪಾಯಿಯ ವಹಿವಾಟಿಗೆ ಕರ್ನಾಟಕದಲ್ಲಿ ವೇದಿಕೆ ಸಜ್ಜುಗೊಳಿಸಲು ನಾಂದಿ ಹಾಡಿರುವದು ಸಂತೋಷ ಹಾಗು ಮೆಚ್ಚತಕ್ಕ ವಿಷಯವೇ. ಬಾಗವಹಿಸಿ, ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವದಾಗಿ ಬರವಸೆ ಕೊಟ್ಟಿರುವವರೆಲ್ಲ ಕೈಗಾರಿಕೆ ಸ್ತಾಪನೆ ಮಾಡುತ್ತಾರೋ ಇಲ್ಲವೋ ಆದರೆ ಆ ದಿಶೆಯಲ್ಲಿ ಪ್ರಯತ್ನ ಸಾಗಿರುವದು ಒಂದು ಹೆಮ್ಮೆಯ ವಿಷವೆಯೇ.

ಸೂಕ್ಹ್ಮವಾಗಿ ಗಮನಿಸಿದರೆ ಈ ಸಾರಿಯ ಸಮಾವೇಶದಲ್ಲಿ ಆಗಿರುವ 4 ಲಕ್ಷ ಕೋಟಿ ರುಪಾಯಿ ಒಡಂಬಡಿಕೆಯಲ್ಲಿ ಅರ್ದಕಿಂತ ಹೆಚ್ಚು ಅಂದರೆ 2.21 ಲಕ್ಷ ಕೋಟಿ ರುಪಾಯಿ ಮೊತ್ತದ 38 ಯೋಜನೆಗಳು ಕಬ್ಬಿಣ ಮತ್ತು ಉಕ್ಕು ಉದ್ಯಮದ್ದೆ. ಹೀಗಾಗಿ ಇದನ್ನ Global Investors Meet ( GIM ) ಬದಲು Steel Investors Meet (SIM) ಅಂತ ಟೈಮ್'ಸ್ ಆಫ್ ಇಂಡಿಯಾ ದಿನ ಪತ್ರಿಕೆಯಲ್ಲಿ ಹೇಳಿರುವದು ಸೂಕ್ತವೆ. ನಮಗೆಲ್ಲ ಗೊತ್ತಿರುವ ಹಾಗೆ ಬೇರೆ ಎಲ್ಲ ಉದ್ಯಮಗಳಿಗಿಂತ ಈ ಕಬ್ಬಿಣ ಮತ್ತು ಉಕ್ಕು ಉದ್ಯಮಕ್ಕೆ ಭೂಮಿ,ನೀರು ಹೆಚ್ಚಿಗೆ ಬೇಕು. ಸರಕಾರವೇ ಹೇಳಿರುವ ಹಾಗೆ 1 ಲಕ್ಷ ಎಕರೆ ಜಮೀನನ್ನು ಹೋಶ ಪಡಿಸಿಕೊಳ್ಳಲು ಸಿದ್ದತೆ ನಡಿದಿದೆ . ಈ ಒಂದು ಲಕ್ಷ ಜಮೀನಿನಲ್ಲಿ ಎಷ್ಟು ಎಕರೆ ನೀರಾವರಿ ಹಾಗು ಊಳಲು ಯೋಗ್ಯವಾದ ಭೂಮಿ ಇರುತ್ತೆ ಅನ್ನೋದೇ ಚಿಂತೆ. 2000-01 ರಲ್ಲಿ Ministry of Agriculture ಹೊರಡಿಸಿರುವ ಪ್ರಕಟನೆಯಂತೆ ನಮ್ಮ ರಾಜ್ಯದಲ್ಲಿ ಇರುವ ಒಟ್ಟು ನೀರಾವರಿ ಭೂಮಿ Net Irrigated Area (NIA) 2643 ಸಾವಿರ ಹೆಕ್ಟೇರ್ ಗಳು ಅಂದ್ರೆ ಸುಮಾರು 66 ಲಕ್ಷ ಎಕರೆ ಮತ್ತು ಒಟ್ಟು ಬಿತ್ತಲು ಯೋಗ್ಯವಾಗಿರುವ ಭೂಮಿ Net Sown Area (NSA) 10410 ಸಾವಿರ ಹೆಕ್ಟೇರ್ ಗಳು ಅಂದ್ರೆ ಸುಮಾರು 2 ಕೋಟಿ ಎಕರೆಗೂ ಅಧಿಕ. ಇಷ್ಟು ಭೂಮಿಯಲ್ಲಿ ಈಗಾಗಲೇ ಎಷ್ಟು ಭೂಮಿ ಅಭಿವೃದ್ಧಿ ಹೆಸರಲ್ಲಿ, ರಿಯಲ್ ಎಸ್ಟೇಟ್ ಹೆಸರಲ್ಲಿ, ಭೂ ಮಾಫಿಯ ಹೆಸರಲ್ಲಿ ಕಬಳಿಕೆಯಾಗಿದೆಯೋ ಮತ್ತು ಹೆತೆಚ್ಚವಾಗಿ ಗೊಬ್ಬರ ಮತ್ತು ರಾಸಾಯನಿಕ ಬಳಕೆಯಿಂದ ಎಷ್ಟು ಭೂಮಿ ತನ್ನ ಸಾರವನ್ನು ಕಳೆದುಕೊಂಡು ಊಳಲು ಅಯೋಗ್ಯವಗಿದೆಯೋ ಗೊತ್ತಿಲ್ಲ. ಶೇಕಡಾ 65 ಕಿಂತ ಹೆಚ್ಚಿಗೆ ಜನರು ಇಂದಿಗೂ ಕೃಷಿಯನ್ನೇ ತಮ್ಮ ಬದುಕಾಗಿಸಿಕೊಂದಿದ್ದಾರೆ ಮತ್ತು ಅದರಲ್ಲೇ ಬದುಕುತಿದ್ದಾರೆ. ಇಂತ ಸಂದರ್ಬದಲ್ಲಿ ನಮ್ಮ ಸರಕಾರಗಳು ಕೈಗಾರಿಕೆ ಹೆಸರಲ್ಲಿ ಬೆಳೆಯಲು ಯೋಗ್ಯ ಮತ್ತು ನೀರಾವರಿ ಭೂಮಿಯನ್ನು ಕಿತ್ತುಕೊಂಡು ಬಿಟ್ಟರೆ ನಮ್ಮ ರೈತಾಪಿ ಜನಗಳ ಹೊಟ್ಟೆಯ ಗತಿಯೇನು. ಅಷ್ಟೇ ಅಲ್ಲ ಬೆಳೆ ಕಡಿಮೆ ಆದಂತ ಆಹಾರದ ಉತ್ಪಾದನೆ ಕಡಿಮೆಯಾಗುತ್ತದೆ. ಹೀಗೆ ಮುಂದುವರೆದರೆ ನಾಳೆ ತಿನ್ನಲು ಅಕ್ಕಿಯೂ ಸಿಗದಾದಾಗ ದುಡ್ಡನ್ನು ಇಲ್ಲ ಕಾರ್ಖಾನೆಗಳು ಮತ್ತು ಕಂಪನಿಗಳು ಉತ್ಪದಿಸಿಸುವ ಕಬ್ಬಿಣ, ಉಕ್ಕು ಇಲ್ಲ ಸಾಫ್ಟ್ವೇರ್ ನ ತಿನ್ನೋಕೆ ಆಗುತ್ತಾ?

ನೀತಿ ನಿಯಮಗಲಿಲ್ಲದೆ ಗಣಿಗಾರಿಕೆಗೆ ಪರವಾನಿಗೆ ಕೊಟ್ಟ ಪರಿಣಾಮ ಇವತ್ತು ಬಳ್ಳಾರಿಯಲ್ಲಿ ಅಷ್ಟೇ ಅಲ್ಲ ಗಣಿಯಿಂದ ಎದ್ದ ದೂಳು ಪಕ್ಕದ ಜಿಲ್ಲೆ ರಾಜ್ಯಗಳಿಗೂ ಹರಡಿ ನಮ್ಮ ಜನ ದೂಳನ್ನೇ ತಿಂದು ದೂಳನ್ನೇ ಉಸಿರಾಡುವಂತಾಗಿದೆ. ವೈಜ್ಞಾನಿಕ ವಿಧಿ ವಿಧಾನಗಳೆಲ್ಲವನ್ನು ಗಾಳಿಗೆ ತೊರಿ ಇವತ್ತು ಈ ಕಾರ್ಖಾನೆಗಳು ಹೊರಸೂಸುವ ಆರೋಗ್ಯ ಹಾನಿಕಾರಕ ರಾಸಾಯನಿಕ ವಸ್ತುಗಳು ನಮ್ಮ ಕಾವೇರಿ, ತುಂಗಾ ಭದ್ರ ಮತ್ತು ಕೃಷ್ತ್ನ ಗಳಂತ ನದಿಗಳನ್ನು ಮತ್ತು ಪರಿಸರವನ್ನು ಕಲುಸಿತ ಮಾಡಿವೆ. ರಾಯಚೂರಿನ ಥರ್ಮಲ್ ಪವರ್ ಸ್ಟೇಷನ್ ನಿಂದಾಗಿ ಬೇರೆಲ್ಲ ಜಿಲ್ಲೆಗಳಿಗಿಂತ ಮೂರರಿಂದ ನಾಲ್ಕು ಡಿಗ್ರೀಯಷ್ಟು ಬಿಸಿಲ ಶಾಕ ಹೆಚ್ಚಾಗಿ ದಿನವೂ ಬೆರವುತಿದ್ದೇವೆ. ವಿಪರ್ಯಾಸ ಅಂದ್ರೆ ರಾಜ್ಯಕ್ಕೆ ಬೆಳಕು ಕೊಡೊ ಥರ್ಮಲ್ ಸ್ಟೇಷನ್ ರಾಯಚೂರನ್ನು ಮಾತ್ರ ಸದಾ ಕತ್ತಲಲ್ಲೇ ಇಟ್ಟಿದೆ. ಸರಕಾರಗಳ ತಲೆಯಿಲ್ಲದ ಆದೇಶಗಲಿಂದಾಗಿ ಭೂಮಿ ಕಳೆದುಕೊಂಡು, ಕೈಗಾರಿಕೆ ಗಳ ಮಾಲಿಕರ ಲಾಭದ ಆಶೆಗೆ ನಮ್ಮ ಆರೋಗ್ಯವನ್ನು ಬಲಿಕೊಟ್ಟು ಪ್ರತ್ಯಕ್ಷವಾಗಿ ಪರೋಕ್ಷವಾಗಿ ದಿನವೂ ಸತ್ತು ಬದುವುದುಕಿಂತ ನೇರವಾಗಿ ಒಮ್ಮೆ ನಮ್ಮೆಲ್ಲ ರೈತರನ್ನು ಒಂದು ಮೈದಾನದಲ್ಲಿ ಒಟ್ಟುಗೂಡಿಸಿ ಜಲಿಯನ್ ವಾಲಾಭಾಗ್ ರೀತಿ ಗುಂಡಿಕ್ಕಿ ಕೊಂಡು ಬಿಡಿ, ಇಲ್ಲ ಮುಂಬೈ ದಾಳಿಯ ರೀತಿ ಸಿಕ್ಕ ಸಿಕ್ಕವರನ್ನು ಬಂದೂಕಿನಿಂದ ಸುಟ್ಟು ಬಿಡಿ. ಸಾಯುವ ಅರೆಗಳಿಗೆಯಲ್ಲಿ ನಮ್ಮನ್ನು ಭಾರತಿಯ ಬ್ರಿಟಿಶ್ ಸರಕಾರ ಕೊಂದಿತು ಎಂದೋ ಅಥವಾ ಪಾಕಿಸ್ತಾನ್ ಉಗ್ರರಂತೆ ನಮ್ಮ ಸರಕಾರ ನಮ್ಮನ್ನೇ ಕೊಂದಿತೆಂದು ಶಪಿಸಿ ಸಾಯಿತ್ತಾರೆ. ಅನಂತರ ಅವರ ಸಮದಿಗಳ ಮೇಲೆ ನಿಮ್ಮ ಕೈಗಾರಿಕೆಯ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಬಹುದು.

ನಾವ್ಯಾರೂ ಕೈಗಾರಿಕಾ ವಿರೋಧಿಗಲ್ಲ, ಆದರೆ ಕೈಗಾರಿಕೆ ಹೆಸರಲ್ಲಿ ರೈತನ ಹೊಟ್ಟೆ ಮೇಲೆ ಹೊಡೆಯೋದು ಎಷ್ಟು ಸರಿ? ರೈತನ ಮಗನಾಗಿ, ರೈತರ ಕಷ್ಟ ಸುಖಗಳನ್ನು ಆಳವಾಗಿ ಅರಿತಿರುವ ನಮ್ಮ ಮುಖ್ಯ ಮಂತ್ರಿಗಳು ಬಂಡವಾಳ ಹೂಡುವವರಿಗೆ ರತ್ನ ಗಂಬಳಿ ಹಾಸುವ ಅರತುರಿಯಲ್ಲಿ ನಮ್ಮ ರೈತರ ಹಿತಸ್ತಕ್ತಿ ಮರೆಯದಿರಲಿ. ಫಲವತ್ತಾದ ನೀರಾವರಿ ಮತ್ತು ಊಳಲು ಯೋಗ್ಯವಾದ ಭೂಮಿಯನ್ನು ರೈತರಿಂದ ಕಿತ್ತಿಕೊಂಡು ಅವರನ್ನು ಸಾವಿನ ನೇಣು ಕಾಣಿಕೆಗೆ ದೂಕದಿರಲಿ. ನಾಲ್ಕು ಲಕ್ಷ ಕೋಟಿ ರುಪಾಯಿ ವ್ಯಹಾರದ ಗುಂಗಲ್ಲಿ ಆರು ಕೋಟಿ ಕನ್ನಡಿಗರ ಜೀವನದ ದೀಪ ಆರಿಸದಿರಲಿ. ವಿವೇಚನೆಯ ನಿರ್ಧಾರಗಳನ್ನು ತೆಗೆದುಕೊಂಡು ರೈತರನ್ನೂ ಕಾಪಾಡಿ, ಕೈಗಾರಿಕೆ ಬೆಳೆಯಲು ಅನುವು ಮಾಡಿಕೊಡಿ.

Sunday, August 15, 2010

ನಿನ್ನ ಹಸಿ ತಲೆ ಕೂದಲು ಇನ್ನೂ ಆರಿಲ್ಲ ನನ್ನ ಬುಜದ ಮೇಲೆ.....

ಇಲ್ಲ ಚಿನ್ನ, ನಿನ್ನ ಮರಿಯೋಕೆ ಆಗ್ತಾ ಇಲ್ಲ, ನಿನ್ನ ಅಷ್ಟೇ ಅಲ್ಲ, ನಿನ್ನ ಮರೆಯಬೇಕು ಅನ್ನೋದೇ ಮರೇತು ಹೋಗಿದೆ. ಮೌನ ಮಾತಾಗಿ ಮಾತು ಬದುಕಾಗುತ್ತೆ ಅಂತಾರೆ, ಆದರೆ ಇಲ್ಲಿ ಅದಕ್ಕೆ ವಿರುಧ್ಧ ಆಗಿದೆ ಕಣೆ ನೀನಿಲ್ಲದೆ.ದೇವರು ಎಷ್ಟು ಕಟೋರಿ ಅಲ್ವ? ಹೆಣ್ಣಿಗೆ ತಾಳ್ಮೆ ಕೊಟ್ಟ, ಅದು ಮೀರಿದಾಗ ದುಖ: ಹೊರ ಹಾಕಲು ಕಣ್ಣೀರು ಕೊಟ್ಟ, ಹಿಂದಿನದೆಲ್ಲವನೂ ಮರೆಯುಲು ಮರೆವು ಕೊಟ್ಟ, ಕೊಟ್ಟಿದ್ದೆಲ್ಲವನ್ನೋ ಧಾರಾಳವಾಗಿ ಉಪಯೋಗಿಸುವ ಅವಕಾಶ ನೀಡಿದ. ನಂಗೂ ತಾಳ್ಮೆ ಕೊಟ್ಟಿದ್ದಾನೆ, ಆದರೆ ತಾಳಿದಷ್ಟೂ ನಾನು ಏನೋ ಕಳೆದುಕೊಳ್ತಾ ಇದ್ದೀನೇನೋ ಅನ್ನೊ ದುಗುಡ ಇಟ್ಟಿದ್ದಾನೆ. ದುಖ: ತಡಿದೆ ಕಣ್ಣೇರು ಹಾಕಿದರೆ ಇವ ಗಂಡಸೇ ಅಲ್ಲ ಅನ್ನುವಂತ ಸಮಾಜ ಸೃಸ್ಟಿಸಿದ್ದಾನೆ. ಇನ್ನು ಮರೆವು ಕೊಡೋದೇ ಆತ ಮರೆತ ಅಂತ ಕಾಣುತ್ತೆ, ಏನಿದ್ರು God is great ಕಣೆ.

ಇವತ್ತು ನಾವು ಆಫೀಸ್ಗೆ ಹೋಗುತ್ತಿದ್ದ ಬಸ್ಸು ನೋಡಿದೆ ಕಣೆ. ಅದೇ ನಮ್ಮ ಓಲ್ಡ್ ಬಸ್ ಸ್ಟಾಪ್ ಅತ್ರ , ಹೇಗಿತ್ತೋ ಆಗೇ ಇದೆ, ನನ್ನ ನಿನ್ನ ಬಿಟ್ಟು. ಆ ಬಾಗಿಲ ಹಿಂದಿನ ಕಿಡಿಕಿ ಸೀಟ್ ಕಾಲಿ ಕಾಲಿ. ಪ್ರತಿ ದಿನ ಐದು ನಿಮಿಷ ಲೇಟ್ ಆಗಿ ಸ್ಟಾಪ್ ತಲುಪುತ್ತ ಇದ್ದೆವು. ಓಡೋಡಿ ಬಂದು ಬಸ್ ಒಳ ಹೊಕ್ಕು ಎದೆಯುಸಿರು ಬಿಡುತ್ತ ಒಬ್ಬರಿಗೊಬ್ಬ ಮುಖ ಮುಖ ನೋಡಿ ಗೊಳ್ಳೆಂದು ನಕ್ಕು ಸುತ್ತ ಮುತ್ತಲಿನ ಸಿಟ್ಟಿನ ನೋಟದ ಕಂಗಳಿಗೆ ಒಂದು sorry ಹೇಳಿ ನೀನು ಕಿಡಿಕಿ ಕಡೆ, ನಿನ್ನ ಪಕ್ಕ ನಾನು ಒಂದೇ ಸೀಟ್ ನಲ್ಲಿ ಕುಳಿತರೆ ಅಲ್ಲಿಗೆ ಜಗತ್ತೆ ಮರೆತು ಹೋಗುತಿತ್ತು. ಬೀಸುವ ಪ್ರತಿ ಸಲದ ಆ ಗಾಳಿಗೆ ನಿನ್ನ ಆ ಹಸಿ ಉದ್ದು ಕೂದಲು ನನ್ನ ಮುಖದ ಮೇಲೆ ಬಿದ್ದು, ನೀರು ಗುಳ್ಳೆ ಮೂಡಿಸುತಿದ್ದಾಗ ನನ್ನದೆಯ ಬಡಿತ ಹಿಡಿತ ತಪ್ಪುತ್ತಾ ಇತ್ತು. ಅದೇಕೆ ಅಷ್ಟು ನಾಚಿ ನೀರಗ್ತಾ ಇದ್ದೆ ನಿನ್ನ ಕೂದಲು ನನ್ನ ಬಿಳಿ ಶರ್ಟ್ ಮೇಲೆ ಉದುರಿ ಬಿದ್ದಾಗ?. ಜಗತ್ತಿನಲ್ಲಿ ಎಷ್ಟೋ ತರದ ಶಂಪೋಗಳು ಇವೆ ಆದರೆ ನೀನು ಬಳಸುತ್ತಿದ್ದ ಶಂಪೋ ಯಾವ ಕಂಪನಿ ತಯಾರಿಸುತ್ತಿತ್ತೋ. ಆ ನಿನ್ನ ತಲೆ ಕೂದಲಿನ ಸಂಪು ಸಂಪು ಸುವಾಸನೆ ಇಡಿ ದಿನ ನನ್ನ ದಣಿಯದಂತೆ ಕೆಲಸ ಮಾದಿಸುತಿತ್ತು. ರೇಡಿಯೋದಲ್ಲಿ FM ಆನ್ ಮಾಡಿ ನಾನೊಂದು ನೀನೊಂದು ಕಿವಿಗೆ ಹಿಯರ್ ಫೋನ್ ಹಾಕಿಕೊಂಡು ಎಷ್ಟು ಹಾಡು ಗುನು ಗುನಿಸಿ ಪಕ್ಕದಲ್ಲಿದ್ದೊರಿಗೆ irritate ಮಾಡುತಿದ್ದೆವಲ್ಲ. ದುನಿಯಾ ಚಿತ್ರದ ‘ಕರಿಯ I love you, ಕರುನಾಡ ಮೇಲಾಣೆ’ ಹಾಡು ಬಂದಾಗ ನೀ ಅದರ ಸಾಹಿತ್ಯ ಬದಲಿಸಿ ನನ್ನ ಛೇಡಿಸಲು ‘ಕರಿಯ I hate you, ನಿನ್ನ ಮೇಲಾಣೆ’ ಅಂತ ಹಾಡ್ತಾ ಇದ್ದೆ. ನಾ ಕರಿಯ ಆದರೆ ಮನಸು ತು೦ಬ ಬಿಳಿದಿತ್ತು ಕಣೆ, ಇವತ್ತಿಗೂ ಆ ಹಾಡು ಎಲ್ಲಿ ಹೇಳಿದರು ಒಂದು ಕ್ಷಣ ನಿಂತು ಬಿಡ್ತೀನಿ. ಒಂದು ವಿಷ್ಯ ಗೊತ್ತ?, ಎಲ್ಲರು ಬೆಂಗಳೂರಿನ ರಸ್ತೆಗಳು ಚೆನ್ನಗಾಗಲಿ, ಟ್ರಾಫಿಕ್ ಕಡಿಮೆ ಆಗಲಿ ಅಂತ ಬೇಡಿಕೊಳ್ತಾರೆ ಆದರೆ ನಾನು ಮಾತ್ರ ರಸ್ತೆ ತುಂಬ ದೊಡ್ಡ ದೊಡ್ಡ ಕಂದಕಗಳೆ ಬೀಳಲಿ ಅಂತ ದೇವರಲ್ಲಿ ಪ್ರಾರ್ತನೆ ಮಾಡ್ತಾ ಇದ್ದೆ. ಯಾಕೆ ಗೊತ್ತ? ಪ್ರತಿ ಬಾರಿ ನಮ್ಮ ಬಸ್ ಕಂದಕದಲ್ಲಿ ಇಳಿದು ಮೇಲೆಳುವಾಗ ನೀನು ನನ್ನ ಮೇಲೆ ಬೀಳುತ್ತಾಯಿದ್ದೆ, ಹೇಗೆ ಮರೆಯಲ್ಲಿ ಪ್ರಿಯೆ ನಿನ್ನ ಆ ಬೆಚ್ಚಗಿನ ತೋಳಿಲ್ಲದ ಕೈಯ ಸ್ಪರ್ಶ. ನಿಜ ಹೇಳ್ತಾ ನನ್ನಲ್ಲಿ ನಾನು ಹುಡುಗನನ್ನು ಕಂಡಿದ್ದೆ ಆವಾಗ. ಹೋಗ್ತಾ ಹೋಗ್ತಾ ನೀ ನಿದ್ದೆಗೆ ಜಾರಿ ನನ್ನ ಬುಜದ ಮೇಲೆ ತಲೆಯಿಟ್ಟು ಮಲಗಿರುವಾಗ ನನ್ನಲ್ಲಿ ನನಗೆ ಏನೋ ಒಂದು ಹೆಮ್ಮೆ. ಅದೆಂತದ್ದೋ ಗರ್ವ. ಹಿಗ್ಗಿ ಹೆದೆವುಬ್ಬಿಸಿ ಕುಳಿತು ಕೊಳ್ತಾ ಇದ್ದೆ. ಆಫೀಸ್ ತಲುಪೋದೆ ಗೊತ್ತಾಗ್ತಾ ಇರ್ಲಿಲಿಲ್ಲ.

ಇವತ್ತು ನೀನೆಲ್ಲೋ ನಾನೆಲ್ಲೋ, ಬದುಕು ಎಷ್ಟು ವಿಚಿತ್ರ ಅನ್ನಿಸುತ್ತೆ. ಎಲ್ಲೋ ಇದ್ದೆವು ಹೇಗೋ ಬೇಟಿ ಆಯ್ತು, ಪ್ರೀತಿ ಹುಟ್ಟಿತು, ಹುಟ್ಟಿದಷ್ಟೇ ಬೇಗ ಸತ್ತು ಹೋಯ್ತು. ಬೇಟಿ, ಹುಟ್ಟು , ಸಾವು ಯಾವು ಕಾರಣ ಇಲ್ಲದೆ ಬಂದವು, ಕಾರಣ ಹೇಳದೆ ಹೋದವು. ನೆನಪುಗಳನ್ನ ಕಾಣಿಕೆಯಾಗಿ ಬಿಟ್ಟು ಎಲ್ಲ ಮರೆಯಾದವು. ಏನಿದ್ರು God is great ಕಣೆ.
-Rajashekara Gouda

Thursday, July 22, 2010

ಬೇಡ ಕಣೋ ಈ ಪ್ರೀತಿ ಪುರಾಣ

ಬೇಡ ಕಣೋ ಈ ಪ್ರೀತಿ ಪುರಾಣ
ನನ್ ನಿಮ್ಮಂತ ಮುಗ್ದ ಹುಡುಗರಿಗೆ
ಸಾವೇ ಇಲ್ಲದ ಸುಡುಗಾಡು ಪ್ರಯಾಣ

ಕಣ್ಣು ಹೊಡಿತಾರೆ, ಮುಸಿ ಮುಸಿ ಸ್ಮೈಲ್ ಮಾಡ್ತಾರೆ
ಮುದ್ದು ಮುದ್ದು ಮಾತಿನಿಂದ ಮರಳು ಮಾಡ್ತಾರೆ .

ಶಾಪಿಂಗ್ ಅಂತ ಸಿಕ್ಕ ಸಿಕ್ಕ ಮಾಲ್ ಗೆ ನುಗ್ತಾರೆ
ಸಂಜೆ ರಾತ್ರಿ ಆಗೋ ವರೆಗೆ ಜೊತೆಗೆ ತಿರುಗು ಅಂತಾರೆ

ಕಾಲೇಜ್ ಗೆ ಹೋಗುವಾಗ ಡ್ರಾಪ್ ನಾವೇ ಕೊಡಬೇಕು
ಅವರ ಕುಸಿಗೊಸ್ಕರ ನಮ್ಮ ಕೆಲಸಕ್ಕೆ ಗೋಲಿ ಹೊಡಿಬೇಕು

ಪ್ರೀತಿಗಾಗಿ ಪ್ರಾಣ ಕೊಡುವ ಹುಚ್ಚರು ನಾವು
ಇಂತ ಚಿಕ್ಕ ಪುಟ್ಟ ಲೆಕ್ಕವಿಡುವದು ಮೆಚ್ಚಲಾರೆವು

ಇಷ್ಟ ಪಟ್ಟ ಹುಡಿಗಿಗೆ ಕಷ್ಟ ಪಟ್ಟು ಪ್ರೀತಿ ನಿವೇದನೆ ಮಾಡಿದರೆ
ನಿನ್ನನ್ನು ಹಾಗೆ ನೋಡೇ ಇಲ್ಲ ಅಂತ ಟಾ ಟಾ ಹೇಳ್ತಾರೆ ನಮಗೆ ಚೂರಿ ಹಾಕ್ತಾರೆ

ನಮ್ಮಂತ ಹುಡುಗರೆಲ್ಲ ಹುಡಿಗೀರಿಗೆ ಟಿವಿ ಚಾನಲ್ ತರಾ
ಮನಸ್ಸಿಗೆ ಬಂದಂಗೆ ಮುಲಾಜಿಲ್ಲದೆ ಚೇಂಜ್ ಮಾಡ್ತಾರೆ

ಬೇಡ ಕಣೋ ಈ ಪ್ರೀತಿ ಪುರಾಣ
ನನ್ ನಿಮ್ಮಂತ ಮುಗ್ದ ಹುಡುಗರಿಗೆ
ಸಾವೇ ಇಲ್ಲದ ಸುಡುಗಾಡು ಪ್ರಯಾಣ
-ರಾಜಶೇಕರಗೌಡ ಹೊತುರ್
ರಾಯಚೂರು
rjgouda@gmail.com

Saturday, January 9, 2010

ಪ್ರೀತಿಸುವಾಗ ಪ್ರೇಮಿಗಳು, ಮದುವೆಯ ನಂತರ?


ಒಂದು ವಿಚಿತ್ರ ನೋಡಿ, ಒಂದು ಹುಡುಗ ಹುಡಿಗಿ ಪ್ರೀತಿಯಲ್ಲಿ ಬಿದ್ದು ಮಿಂದುತ್ತಿದ್ದರೆ ಈ ಸಮಾಜ ಅವರನ್ನ ಲವರ್ಸ್ ಅನ್ನುತ್ತೆ, ಅದೇ ಲವರ್ಸ್ ಮದುವೆ ಆದರೆ ಗಂಡ ಹೆಂಡತಿ ಅನ್ನುತ್ತೆ ಹೊರತು ಲವರ್ಸ್ ಅಂತ ಅಲ್ಲ.
ಯಾಕೆ ಲವರ್ಸ್ ಮದುವೆಯ ನಂತರವೂ ಲವರ್ಸ್ ಅಂತ ಕರೆಯೋಕೆ ಅಗಲ್ಲವಾ?. ಆಗುತ್ತೆ, ನಾವು ಅವರನ್ನ ಲವರ್ಸ್ ಅಂತ ಕರೆಯುವ ಯೋಚನೆ ಇದ್ದರೂ ಕರೆಸಿಕೊಳೋ ಯೋಗ್ಯತೆ ಅವರಿಗೆ ಇರೋದಿಲ್ಲ.
ಇನ್ನೊಂದು ವಿಚಿತ್ರ ಕೇಳಿ, ಪ್ರೀತಿಸುವಾಗ ಪ್ರೀತಿಸಿದಾತ/ಪ್ರೀತಿಸಿದಾಕೆ ಸಿಗಲ್ಲಿಲ್ಲ ಅಂತ ಪ್ರಾಣ ಬಿಟ್ಟ ಎಷ್ಟೋ ಲೈಲಾ ಮಜ್ನುಗಳ ಕತೆಗಳು ಸಿಗುತ್ತೆವೆ ಹೊರುತು ಮದುವೆಯಾದ ನಂತರ ಏನೋ ಕಾರಣಕ್ಕೆ ಅವರಿಬ್ಬರೂ ಬೇರೆ ಬೇರಾಗಿ ಪ್ರೀತಿಗೆ ಅಂಬಲಿಸಿ ಅಂಬಲಿಸಿ ಜೀವ ಕಳೆದುಕೊಂಡ ಉದಾಹರಣೆ ಇಲ್ಲ.

ಮೊನ್ನೆ 3 -idiots ಸಿನಿಮಾ ನೋಡಲು PVR ge ಹೋಗಿದ್ದೆ, ಆ ಮೂರು idiots ಸಿನಿಮ ಹಾಲ್ನಲ್ಲಿ ಇರೋ ಮಂದಿಯನ್ನೆಲ್ಲ ಹೊಟ್ಟೆ ಹುಣ್ಣಾಗಿಸುವಷ್ಟು ನಗುಸ್ತಾ ಇದ್ದಾರೆ ನನ್ನ ಮುಂದಿನ ಸೀಟಿನ ಒಂದು ಹುಡುಗ ಹುಡಿಗೀನ ಬಿಟ್ಟು. ಅಷ್ಟೇ ಅಲ್ಲ ಆ ಹುಡಿಗಿ ಕಣ್ಣೀರು ಹಾಕ್ತಾ ಇದ್ದಳು. ಮುಖ ಸರಿಯಾಗಿ ಕಾನಿಸುತ್ತಿರಲ್ಲಿಲ್ಲವಾದರೂ ಅವರಾಡೋ ಪಿಸು ಮಾತು ನಂಗೆ ಕೇಳಿಸ್ತಾ ಇತ್ತು. ಅವಳು ತುಂಬಾ ನೊಂದಿದ್ದಳು ದುಖ:ದಲ್ಲೇ ಹೇಳಿದಳು "ರೀ ಇನ್ನೊಂದು ಸಲ ಇವತ್ತು ಆಸ್ಪತ್ರೆಗೆ ಹೋಗೋಣ, ಆದ ವಾರ ಡಾಕ್ಟರ ತಪ್ಪದೆ ಬಂದು ಚೆಕ್ ಮಾಡಿಸಿ ನೋವಿನ ಮೂಲ ಗೊತ್ತಾಗುತ್ತೆ ನಂತರ ಟ್ರೀಟ್ಮೆಂಟ್ ಸ್ಟಾರ್ಟ್ ಮಾಡಬಹುದು ಅಂತ ಹೇಳಿದ್ದಾರೆ, ಪ್ಲೀಸ್ ಕರ್ಣಿ ಇಲ್ಲ ಅನ್ನಬೇಡಿ, ನೀವು ಅಲ್ಲಿರಲೇಬೇಕು". ಆತ ರೇಗಿದ ದನಿಯಲ್ಲೇ ಉತ್ತರಿಸಿದ" ನೋಡೆ ಪ್ರತಿಬಾರಿ ನಿನ್ನ ಜೊತೆ ಆ ಹಾಳು ಆಸ್ಪತ್ರೆಗೆ ಬರೋಕ್ಕಾಗೋಲ್ಲ, ನಂಗೆ ಬೇರೆ ಕೆಲಸ ಇಲ್ಲವಾ? ನಾಳೆ ನಂಗೆ ಆಫೀಸ್ ನಲ್ಲಿ ಕ್ಲೈಂಟ್ ಜೊತೆ ಮೀಟಿಂಗ್ ಇದೆ. ಅದನ್ನ ಹೇಗೆ ನಿಬಾಯಿಸಲಿ ಅಂತ ಹೆಣಗುತಾ ಇದ್ದರೆ ಮದ್ದ್ಯ ನಿನ್ನ ಕಾಟ, ಸರಿಯಾಗಿ ಸಿನಿಮ ನೋಡಲು ಬಿಡಲ್ಲ, ನೋಡು ಬೇಕಿದ್ದರೆ ನೀನೊಬ್ಬಳೆ ಹೋಗು, ಒಂದಲ್ಲ ಹತ್ತು ಟೆಸ್ಟು ಆದರೂ ಮಾಡಿಸಿಕೋ, ಕರ್ಚು ಎಷ್ತಾದರೂ ಪರವಾಗಿಲ್ಲ, ನಾನು ನಂತರ ಆಫೀಸಿನಲ್ಲಿ ಮೆಡಿಕಲ್ ರೀ-ಇಮ್ಬರ್ಸ್ ಮಾಡಿಕೊಲ್ತೀನಿ, ಬಟ್ ನನ್ನ ಮಾತ್ರ ಪೀಡಿಸೋದು ಬಿಡು.", ಅಲ್ಲಿಗೆ ಅವಳ ದುಖ: ಕಣ್ಣೇರು ಎರಡೂ ಹೆಚ್ಹಾಯ್ತು, ನಂಗೂ ಎರಡೂ ಕಣ್ಣುಗಳೂ ತೆವಯಯ್ತು, ಆಮಿರಖಾನ್ನ ಹುಚ್ಚಾಟ ನೋಡಿ ನಗು ಹೆಚ್ಚಾಗಿ ಒಂದು ಕಣ್ಣು, ಆ ಹುಡಿಗಿಯ ವ್ಯತೆ ಕೇಳಿ ಇನ್ನೊಂದು ಕಣ್ಣು. ಸರಿ ಇಂಟರ್ವಲ್ ಟೈಮ್ ನಲ್ಲಿ ಸಿನಿಮಾ ಹಾಲ್ ಹೊರಗಡೆ ಮೊಬೈಲ್ ನಲ್ಲಿ ಗೆಳೆಯನ ಕಾಲ್ ಹೆಳಿತಾ ಇದ್ದೆ, ಒಂದು ಕ್ಷಣ ನಾನೇ ಜಾರಿ ಬಿದ್ದೆ ಅನ್ನೋ ಫೀಲಿಂಗ್. ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಜೋಡಿ ನನ್ನಿಂದ ಕೊಂಚ ದೂರದಲ್ಲಿ ಮಾತೆ ಇಲ್ಲದೆ ಅಪರಿಚಿತರಂತೆ ನಿಂತಿದ್ದರು, ಅಷ್ಟೇ ಆಗಿದ್ದರೆ ಏನೂ ಅನಿಸುತ್ತಿರಲಿಲ್ಲ, ಆದರೆ ಅವರಿಬ್ಬರೂ ನನ್ನ ಕ್ಲೋಸ್ ಫ್ರೆಂಡ್ಸ್. ಒಂದು ಕಾಲದಲ್ಲಿ ಮದುವೆಗೆ ಮುಂಚೆ ಈ ನನ್ನ ಗೆಳೆಯ ಆ ಹುಡಿಗೀನ ಎಸ್ಟೊಂದು ಪ್ರೀತಿಸುತ್ತಿದ್ದ ಅಂದ್ರೆ ಒಮ್ಮೆ ಅವಳು ಸ್ಕೂಟಿನಿಂದ ಬಿದ್ದು ಗಾಯ ಮಾಡಿಕೊಂಡಾಗ, ಇಡಿ ರಾತ್ರಿ ಅವಳ ಕಾಲನ್ನ ತನ್ನ ತೊಡೆ ಮೇಲೆ ಇಟ್ಟುಕೊಂದು ಮುಲಾಮು ಹಚ್ಚಿದ್ದ, ಅದಕ್ಕೆ ಏನೋ ಅಂತ ಪ್ರೀತಿಗೆ ಮೆಚ್ಚಿ ಮನಸೋತು ಇಬ್ಬರ ಮನೆ ಕಡೆಯವರು ಅವರಿಬ್ಬರ ಮದುವೆ ಮಾಡಿದ್ದ್ದರು. ಮದುವೆಯಾಗಿ ಒಂದೂವರೆ ವರ್ಷ ಕಳೆದಿಲ್ಲ, ಆಗಲೇ ಈ ರೀತಿ ವರ್ತಿಸುತ್ತಿರೋದು ನೋಡಿ ಬೇಜಾರಯ್ತು. ಮೌನ ಮುರಿದು ನಾನೇ ಅವನ್ನ ಮಾತಾಡಿಸಿದೆ, ನನ್ನ ನೋಡಿದ ತಕ್ಷಣ ಆ ಹುಡಿಗಿ ಒಳ ಹೋದಳು ಹಾಗೆ ಬುಜದಮೇಲೆ ಕೈ ಹಾಕಿ ಸಲುಗೆ ಇಂದ ಕೇಳಿದೆ ಏನಾಯ್ತು, ಏನಾಗ್ತಿದೆ ಗೆಳೆಯ?. ಆ ಮಹಾಶ್ಯಾಯ ಹೇಳಿದ "ಏನ್ ಮಾರಾಯ ಸಾಕಾಗಿದೆ ಜೀವನ ಇವಳ ಜೊತೆ. ಯಾವಾಗಲು ನೋವು, ಒಂದಿನ ಹೊಟ್ಟೆ ನೋವು ಇದ್ದರೆ ಇನ್ನೊಂದಿನ ತಲೆ ನೋವು, ಮತ್ತೊಂದಿನ ಶೀತ. ವಾರಕ್ಕೆ ಎರಡು ಜಂಡೂ ಭಂ ಸೀಸೆ ಕಾಲಿಯಾಗುತ್ತೆ. ಅವಳ ಪಕ್ಕದಲ್ಲಿ ಮಲಗಿದೆರೆ ಸಾಕು ಆ ಟ್ಯಾಬ್ಲೆಟ್ ಟಾನಿಕ್ ವಾಸನೆ ತಡಿಯೋಕೆ ಆಗದೆ ಓಡಿ ಹೋಗಲಾ ಅನ್ನಿಸುತ್ತ್ತೆ, ಮನೆ ಒಂದು ಸಣ್ಣ ಆಸ್ಪತ್ರೆ ಆಗಿದೆ. ಪ್ರತಿ ವಾರ ಡಾಕ್ಟರ ನ ಮೀಟ್ ಅಗಬೇಕು, ನನ್ನ ಈ ಕೆಲಸದ ಟೈಮ್ ನಲ್ಲಿ ಇವಳು ಜೊತೆಗೆ ಬರಬೇಕು ಅಂತ ಹಠ ಇಡಿತಾಳೆ. ವೆರಿ ಬ್ಯಾಡ್ ಗರ್ಲ್.". ಇಷ್ಟು ಕೇಳಿ ಒಳಗೆ ಒಂದು ಮರುಕ ಹುಟ್ಟಿತು ನಂಗೆ. ಅಲ್ಲ ಒಮ್ಮೆ ಅವಳು ಊರಿಗೆ ಹೋಗುವಾಗ ಜೊತೆ ಯಾರೋ ಇರಲಿಲ್ಲ ಅಂತ ನೊಂದು, 500 ಕಿಲೋ ಮೀಟರ್ ಬೈಕ್ ನಲ್ಲೆ ಕರೆತ್ದುಕೊಂಡು ಹೋಗಿ ಬಿಟ್ಟು ಬಂದ ಭೂಪ ಇವತ್ತು ಆಸ್ಪತ್ರೆ ಗೆ ಹೋಗೋಕೆ ರೆಡಿ ಇಲ್ಲ ಅಂದ್ರೆ ನಂಬೋಕೆ ಆಗ್ತಾ ಇಲ್ಲ. ಇದು ಇವನೊಬ್ಬನ ಗೋಳು ಅಲ್ಲ, ಮೋಸ್ಟ್ ಆಫ್ ದಿ ಲವರ್ಸ್ ಕಂ ಗಂಡ ಹೆಂಡತಿ ಸ್ತಿತಿ ಹೀಗೇನೆ. ನನ್ನ ಗೆಳತಿಯೊಬ್ಬಳು ಹೇಳಿದ್ದಳು " ನನ್ನ ಗಂಡ ಆಗೋನು ಗಂಡ ಆಗಿರದೆ ಗೆಳೆಯನಾಗಿರಬೇಕು. ಮದುವೆ ಆಗಿ, ಹತ್ತು ವರುಷ ಸಂಸಾರ ಆಗಿ, ಸೊಂಟದಲಿ ಆಕಡೆ ಈಕಡೆ ಒಂದೊಂದು ಟೈರ್ ಬೆಳೆದು ಕಣ್ಣಿಗೆ ಚಾಳೀಸು ಹಾಕಿ ಮುದಿ ಆಂಟಿ ತರಾ ಕಂಡರೂ ನನ್ನವನು ಫಸ್ಟ್ ಟೈಮ್ ಪ್ರೋಪೋಸ್ ಮಾಡುವಾಗಿನ ಆ ಪ್ರೀತಿ, ಆಸೆ, ದುಗುಡ ಆಗಲೂ ಇರಬೇಕು" ನೆನೆಸಿಕೊಂಡು ಸಣ್ಣಗೆ ನಗು ಬಂತು.

ಮದುವೆಗೆ ಮುಂಚೆ ಇರುವ ಆ ಪ್ರೀತಿ, ಕಾಳಜಿ, ಒಂದಿನ ಮಾತಾಡದೆ ಇದ್ದರೆ ಏನೋ ಕಳೆದು ಹೋಯ್ತು ಅನಿಸು ಆ ಫೀಲಿಂಗ್,ಒಂದೆರೆಡು ದಿನ ನೋಡದೆ ಇದ್ದರೆ ಜಗತ್ತೆಲ್ಲ್ಲಿ ಏನೋ ಆಗೋಯ್ತು ಅನ್ನುವಸ್ಟು ವಿರಹ, ಮದುವೆಯಾದ ನಂತರ ಇಗ್ನೋರ್ ಮಾಡೋದು , ಅವಳನ್ನ ಎಷ್ಟೂ ಅಂತ ನೋಡುದು ಅನ್ನೋ ಅಸಡ್ಡೆ ಆಗೋದೇಕೆ? ಹಾಗಂತ ಅವರ ಪ್ರೀತಿ ನಿಜದ ಪ್ರೀತಿ ಅಲ್ಲ ಅಂತನೂ ಅಲ್ಲ. ಮದುವೆಗೆ ಮುಂಚಿನ ಆ ಹುಮ್ಮಸ್ಸು, ಗೆಲ್ಲುವ ತವಕ ಅವಳು ಅವನ ಪಕ್ಕ ಕೂತು ಮಗು ತರ ಮುಸಿ ಮುಸಿ ನಕ್ಕು ಅವನ ಎದೆ ಮೇಲೆ ತಲೆ ಇಟ್ಟಾಗ ಇಡೀ ಈ ಜಗತಲ್ಲಿ ನಾನೇ ರಾಜ ಅವಳೇ ರಾಣಿ ಅಂತ ಪೋಸ್ ಕೊಡೂ ಹುಡುಗ, ತನ್ನ ಹುಡುಗನೇ ಮನ್ಮತ, ಅವನ ಜೊತೆ ಹೆಜ್ಜೆ ಹಾಕುವಾಗ ಅಕಸ್ಮಾತು ಗೆಳತಿಯರೆನೆದ್ದ್ರೂ ಕಣ್ಣಿಗೆ ಬಿದ್ದರೆ ತನ್ನ ಹುಡುಗನ ಭಾಹುವನ್ನ ಮತ್ತಸ್ತು ಗಟ್ಟಿಯಾಗಿ ತನ್ನ ಎದೆಗೆ ತಬ್ಬಿ ವಯಾರದಿಂದ ನಡಿಯೋ ಹುಡಿಗಿ ಒಂದು ವರ್ಷದ ಸಂಸಾರದಲ್ಲಿ ಈ ಎಲ್ಲವನ್ನು ಕರಗಿಸಿಬಿಡ್ತಾರ?

ಅದಕ್ಕೆ ನಾ ಹೇಳಿದ್ದು "ನಾವು ಅವರನ್ನ ಲವರ್ಸ್ ಅಂತ ಕರೆಯುವ ಯೋಚನೆ ಇದ್ದರೂ ಕರೆಸಿಕೊಳೋ ಯೋಗ್ಯತೆ ಅವರಿಗೆ ಇರೋದಿಲ್ಲ".
Any way ಪ್ರೀತಿಸುವಾಗಿನ ಆ experience is just an experience, nether it can’t be expressed nor explained.
ಪ್ರೀತಿಗೆ ಜೈ

--ರಾಜಶೇಕರ ಗೌಡ ಹೋತೂರ್ , ಬಾಗಲವಾಡ